ಸುಮ್ಮನಿರಬಾರದೆ...?

Author : ನೆಲ್ಲೀಕೆರೆ ವಿಜಯಕುಮಾರ್

Pages 160

₹ 130.00




Year of Publication: 2015
Published by: ಸುಮ್‍ ಸುಮ್ನೆ ಪ್ರಕಾಶನ,
Address: ನೊಣವಿನಕೆರೆ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ.

Synopsys

ಗುರೂಜಿ ಶ್ರೀ ಋಷಿ ಪ್ರಭಾಕರ ಅವರ ಮೂಲ ಜ್ಞಾನವನ್ನು ‘ಸುಮ್ಮನಿರಬಾರದೆ...?’ ಶೀರ್ಷಿಕೆಯ ಮೂಲಕ ಲೇಖಕ ನೆಲ್ಲೀಕೆರೆ ವಿಜಯಕುಮಾರ್ ಅವರು ಸಂಗ್ರಹಿಸಿ, ರಚಿಸಿದ ಕೃತಿ. ‘ಪ್ರಯಾಸಕರ ಬದುಕಿಗೊಂದು ಗುಡ್ ಬೈ’ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಬದುಕಿನ ಬಹುತೇಕ ಘಟನೆಗಳು ಆಕಸ್ಮಿಕವಾಗಿರುತ್ತವೆ. ಅವುಗಳ ಮೇಲೆ ಮನುಷ್ಯನ ಹಿಡಿತವಿರುವುದಿಲ್ಲ. ನಮ್ಮ ಪ್ರಯತ್ನಕ್ಕೆ ಮೀರಿದ ಘಟನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅದನ್ನು, ಹೇಗೆ ಸಂಭವಿಸಲು ಸಾಧ್ಯವೋ ಹಾಗೆ ಸಂಭವಿಸಲು ಬಿಡಬೇಕು. ಸಮಸ್ಯೆಯ ಪರಿಹಾರವು ನಮ್ಮ ಪ್ರಯತ್ನದ ಮಿತಿಯಲ್ಲಿದ್ದರೆ ಮಾತ್ರ ಯತ್ಸನಿಸಬೇಕು. ಆಗ ಅದಕ್ಕೊಂದು ಆರ್ಥವಿರುತ್ತದೆ. ತಪ್ಪಿದರೆ, ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲು ನಾವೇ ಕಾರಣರಾಗುತ್ತೇವೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ನೆಲ್ಲೀಕೆರೆ ವಿಜಯಕುಮಾರ್

ನೆಲ್ಲೀಕೆರೆ ವಿಜಯಕುಮಾರ್ ಅವರು ಲೇಖಕರು. ಕಿರುಚಿತ್ರ ಸಂಭಾಷಣೆ ಬರಹಗಾರರು. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ವಾವಿದ್ದಾರೆ. ಸುಮ್ ಸುಮ್ನೆ ಪ್ರಕಾಶನವನ್ನು ಸ್ಥಾಪಿಸಿದ್ದಾರೆ.  ಕೃತಿಗಳು: ಸುಮ್ಮನಿರಬಾರದೆ?, ನಿರ್ಧರಿಸದಿರು ನಿಲ್ಲು ಮನವೇ...!, ಅಶಿಸ್ತಿನಿಂದ ಬದುಕಿರಿ: ಆರೋಗ್ಯವಾಗಿರಿ, ಅರ್ಥX ಪಾದ X ಎತ್ತರ. ...

READ MORE

Related Books