ಸೂರ್ಯ, ಚಂದ್ರ

Author : ಶಿವರಾಮ ಕಾರಂತ

₹ 30.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 080 4011 4455

Synopsys

ಡಾ. ಶಿವರಾಮ ಕಾರಂತ ಅವರು ಮಕ್ಕಳಿಗಾಗಿ ಬರೆದ ನಾಟಕ-ಸೂರ್ಯ,ಚಂದ್ರ. ಮಕ್ಕಳ ಸಾಹಿತ್ಯ ರಚನೆ ಕಷ್ಟ. ಮಕ್ಕಳ ಮನೋವಿಜ್ಞಾನವನ್ನು ಅರ್ಥೈಸಿಕೊಂಡು ಅವರ ಮನೋವಿಕಾಸಕ್ಕೆ ಪೂರಕವಾಗಿ ಸಾಹಿತ್ಯ ರಚಿಸಬೇಕಾಗುತ್ತದೆ. ಮಕ್ಕಳ ಕಲ್ಪನಾ ಲೋಕದಲ್ಲಿ ಸೂರ್ಯ, ಚಂದ್ರರು ಜೀವಂತ ಪಾತ್ರಗಳಾಗಿ, ಕುತೂಹಲದ ಹಾಗೂ ಅಚ್ಚರಿಯ ವಿದ್ಯಮಾನಗಳಾಗಿ ಕಾಣಿಸುತ್ತಾರೆ. ಸೂರ್ಯ,ಚಂದ್ರರ ಸ್ವರೂಪ, ಅವರ ದೈನಂದಿನ ಕೆಲಸ ಹೀಗೆ ವೈವಿಧ್ಯಮಯವಾಗಿ ಪ್ರಶ್ನೆಗಳು ಅವರ ಮನದಲ್ಲಿ ಉದ್ಭವಿಸುತ್ತವೆ. ಇಂತಹ ಕುತೂಹಲಕಾರಿ ಸನ್ನಿವೇಶಗಳನ್ನು ಹೆಣೆದ ನಾಟಕವಿದು.

ಆನಂದ ಎಂಬ ಬಾಲಕ ಜಿಂಕೆ ಮರಿ, ಮೊಲ, ನವಿಲು ಹೀಗೆ ಪ್ರಾಣಿಗಳೊಂದಿಗೆ ಸ್ನೇಹ ಮಾಡಿ ಆಟವಾಡಿಕೊಂಡಿರುತ್ತಿದ್ದ. ಆದರೆ, ಗೂಬೆ, ನರಿ, ಹುಲಿ ಆನಂದನ ಗೆಳೆಯರನ್ನು ರಹಸ್ಯವಾಗಿ ಹಿಡಿದು ತಿನ್ನುತ್ತಿದ್ದವು. ಆನಂದನಿಗೆ ಆಟವಾಡಲು ಗೆಳೆಯರೇ ಇಲ್ಲದಂತಾಯಿತು. ಇಂತಹ ಸನ್ನಿವೇಶದಲ್ಲಿ ದೇವರು ಪ್ರತ್ಯಕ್ಷವಾಗಿ ಸೂರ್ಯ-ಚಂದ್ರರನ್ನು ಕಳುಹಿಸುವುದಾಗಿ ಭರವಸೆ ನೀಡುತ್ತಾನೆ. ಆದರೆ, ಗೂಬೆ, ನರಿ, ಹುಲಿ ಇವು ಸೂರ್ಯ-ಚಂದ್ರರು ಇವನೊಡನೆ ಆಟವಾಡದಂತೆ ಅಡ್ಡಿಪಡಿಸುತ್ತವೆ. ಸೂರ್ಯ ಉರಿಯುತ್ತಾ ಬರುವಾಗ ಆನಂದನ ಮೈ ಉರಿಯುತ್ತದೆ, ಚಂದ್ರ ಕಪ್ಪಗಾಗಿ ಬಂದಾಗ ಆತನನ್ನು ನೋಡಲು ಆನಂದನಿಗೆ  ಇಷ್ಟವಿರುವುದಿಲ್ಲ. ಅಳುತ್ತಾನೆ. ದೇವರು ಮತ್ತೇ ಪ್ರತ್ಯಕ್ಷವಾಗುತ್ತಾನೆ. ವಿಚಾರಿಸಿದಾಗ ಗೂಬೆ, ನರಿ, ಹುಲಿಯ ಮಾತು ಕೇಳಿದ್ದಾಗಿ ಸೂರ್ಯ-ಚಂದ್ರರು ಹೇಳುತ್ತಾರೆ. ಸಿಟ್ಟಿಗೆದ್ದ ದೇವರು ಸೂರ್ಯನಿಗೆ ‘ಉರುಯುತ್ತಿರು’ ಎಂದು ಹಾಗೂ ಚಂದ್ರನಿಗೆ ‘ಕರ್‍ರಗೆ ಇರು’ ಎಂದು ಶಾಪ ಕೊಡುತ್ತಾನೆ. ಯುಗಗಳು ಕಳೆದ ನಂತರ ದೇವರು ತನ್ನ ಶಾಪವನ್ನು ಹಿಂಪಡೆಯುತ್ತಾನೆ. ಆಗ ಸೂರ್ಯ ಮತ್ತು ಚಂದ್ರರು ಆಕಾಶದಲ್ಲಿ ಬೆಳಗುತ್ತಾರೆ. ಮಕ್ಕಳಿಗೆ ಇಷ್ಟವಾಗುತ್ತಾರೆ. ಗೂಬೆ, ನರಿ, ಹುಲಿ ಇವುಗಳಿಗೆ ಹಗಲು ಸಹಿಸದೇ ಇರಲಿ ; ಅವರು ಕಳ್ಳರಿದ್ದಂತೆ ಎಂದು ದೇವರು ಶಾಪ ಕೊಡುತ್ತಾನೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರು ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿದ್ದರು.  

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books