ಸ್ವ ಧ್ವನಿ

Author : ಪಟಮಕ್ಕಿ ರತ್ನಾಕರ್

Pages 308

₹ 350.00




Year of Publication: 2017
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಸಜ್ಜನ ರಾಜಕಾರಣಿ, ವಿಧಾನಸಭೆಯ ಶಾಸಕರಾಗಿದ್ದ  ಬಿ. ಸ್ವಾಮಿರಾಯರ ಬದುಕು ಮತ್ತು ಸಾಧನೆಗಳನ್ನು ’ಸ್ವ ಧ್ವನಿ’ ಪುಸ್ತಕದಲ್ಲಿ ಸಂಕಲಿಸಲಾಗಿದೆ.  ಪಟಮಕ್ಕಿ ರತ್ನಾಕರ್, ಕಬಸೆ ಅಶೋಕಮೂರ್ತಿ, ಮಧು ಗಣಪತಿರಾವ್ ಮಡೆನೂರು, ವೈ.ಕೆ. ರಾಮಚಂದ್ರಪ್ಪನವರ ಸಂಪಾದನೆಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ.

’ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಲು ಅನುಕೂಲ ಕಲ್ಪಸಿಕೊಟ್ಟರು. ಅವರು ಕುಲಪತಿ ಭವನದಲ್ಲಿ ಕುವೆಂಪು ಮಗ ಕೆ.ಪಿ ಪೂರ್ಣಚಂದ್ರ ತೇಜಸ್ವಿ , ಸಿ.ಪಿ.ಕೆ , ಕಡಿದಾಳ್ ಶಾಮಣ್ಣ , ಸುಂದರೇಶ್ , ಅವರ ಒಡನಾಡಿಯಾಗಿ  ಓದಿದ್ದರು. ಕುವೆಂಪು ಅವರ ವೈಚಾರಿಕತೆಯನ್ನು ಮೈಗೂಡಿಸಿಕೊಂಡರು. ಇದು ಅವರ ಹಿರಿಮೆ’ ಎಂದು ಲೇಖಕ  - ಕೋಣಂದೂರು ವೆಂಕಪ್ಪಗೌಡ ಅವರ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. 

ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಅವರು -  ”ಬಿ. ಸ್ವಾಮಿರಾಯರು ಸದನದಲ್ಲಿ ಜ್ವಲಂತ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ರಾಜ್ಯದ ಗಮನ ಸೆಳೆಯುತ್ತಿದ್ದರು. ಸ್ವಾಮಿರಾಯರ ಪ್ರಶ್ನೋತ್ತರ ವೇಳೆಯಲ್ಲಿ ನಾನು ಎಂದೂ ಸದನಕ್ಕೆ ಗೈರಾಗಿರುತ್ತಿರಲಿಲ್ಲ ಎಂದು ಹೇಳಿದ ಮಾತು ಅತಿಶಯೋಕ್ತಿಯಲ್ಲ ಎನಿಸಿತು.’  ಎಂದಿದ್ದಾರೆ.

About the Author

ಪಟಮಕ್ಕಿ ರತ್ನಾಕರ್

ಪಟಮಕ್ಕಿ ರತ್ನಾಕರ್‌ ಅವರು ಹಿರಿಯ ಕಾಂಗ್ರೆಸ್‌ ಮುಖಂಡ. ಅವರು ತೀರ್ಥಹಳ್ಳಿಯ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. 1985ರಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿ ಜನತಾ ಪಕ್ಷದ ಡಿ.ಬಿ. ಚಂದ್ರೇಗೌಡ ಅವರನ್ನು ಸೋಲಿಸಿದ್ದರು. ಎರಡು ಅವಧಿಗೆ ತಾಲ್ಲೂಕು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಪುರಂದರ ವೇದಿಕೆಯ ಉಪಾಧ್ಯಕ್ಷರಾಗಿದ್ದ ಅವರು ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಕೃತಿಗಳಲ್ಲಿ ಆಸಕ್ತರಾಗಿದ್ದರು. 2017ರಲ್ಲಿ ನಿಧನರಾದರು.  ...

READ MORE

Related Books