ಸ್ವಾತಂತ್ಯ್ರದ ಕನಸುಗಾರ

Author : ಬಸವರಾಜ ನಾಯ್ಕರ

Pages 236

₹ 125.00




Year of Publication: 2007
Published by: ಗೀತಾಂಜಲಿ ಪ್ರಕಾಶನ
Address: # 134, 8ನೇ ಅಡ್ಡರಸ್ತೆ, ಗೋವಿಂದರಾಜ ನಗರ, ಬೆಂಗಳೂರು-560 040
Phone: 9740066842

Synopsys

ಡಾ. ಬಸವರಾಜ ನಾಯ್ಕರ ಅವರು ನರಗುಂದ ಸಂಸ್ಥಾನದ ಪೇಶ್ವ ಮನೆತನದ ಭಾಸ್ಕರರಾವ್ ಭಾವೆ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳ ಮಧ್ಯೆ 1857-58ರ ಸುಮಾರಿಗೆ ನಡೆದ ಘರ್ಷಣೆಯ ಪ್ರಸಂಗವನ್ನು ನಾಟಕ ರೂಪಕ್ಕಿಳಿಸಿದ ಕೃತಿ-ಸ್ವಾತಂತ್ಯ್ರದ ಕನಸುಗಾರ.

ನರಗುಂದದ ಬಾಬಾಸಾಹೇಬ ಭಾವೆ ಅವರ ಐತಿಹಾಸಿಕ ಮಹತ್ವ ಕುರಿತಂತೆ ಇತಿಹಾಸದಲ್ಲಿ ದಾಖಲೆಗಳು ಸಿಗುವುದು ವಿರಳ. ಹೀಗಾಗಿ, ಅವರ ಬಗೆಗೆ ಈವರೆಗಿನ ಎಲ್ಲ ನಾಟಕಗಳು ಭಾಗಶಃ ದಾಖಲೆಗಳಿಂದ ಅಪೂರ್ಣವೆನಿಸುತ್ತವೆ. ಆದರೆ. ಪ್ರಯಾಸದ ಅಧ್ಯಯನ ಮೂಲಕ ಸಂಗ್ರಹಿಸಿದ ದಾಖಲೆಗಳ ಆಧರಿಸಿ ಈ ಎಲ್ಲ ನಾಟಕಗಳಿಗಿಂತಲೂ ತೀರಾ ವಿಭಿನ್ನವಾದ ಮಾಹಿತಿ ಹಾಗೂ ಐತಿಹಾಸಿಕ ಪ್ರಸಂಗಗಳಿಂದ ಕೂಡಿದ ‘ಸ್ವಾತಂತ್ಯ್ರದ ಕನಸುಗಾರ’ ನಾಟಕವು ಉತ್ತಮ ಪ್ರದರ್ಶನದ ಗುಣದಿಂದ ಅಮೂಲ್ಯವಾಗಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books