ಸ್ವೀಕಾರ

Author : ವಿವೇಕಾನಂದ ಕಾಮತ್

Pages 204

₹ 200.00




Year of Publication: 2017
Published by: ಸಾಹಿತ್ಯ ಸುಗ್ಗಿ
Address: ನಂ. 40 , 1 ನೇ ಮುಖ್ಯ ರಸ್ತೆ , 2ನೇ ಹಂತ , 3ನೇ ಬ್ಲಾಕ್ , ನಾಗರಭಾವಿ , ಬೆಂಗಲೂರು - 560072
Phone: 9740066842

Synopsys

ಅನುಕಂಪ, ಔದಾರ್ಯದ ಭಿಕ್ಷೆಯಲ್ಲೇ ತನ್ನ ಜೀವನ ಸಾಗಿಸಿಕೊಂಡು ಬಂದ ಅಪೂರ್ವಳಿಗೆ ಸೂರ್ಯನ ಅಂತರಂಗದ ಒಳಹೊಕ್ಕು ಅವನ ನೋವನ್ನು ಗುರುತಿಸುವುದು ಸುಲಭ ಸಾಧ್ಯವಾಗಿತ್ತು. ಕತ್ತಲು ತುಂಬಿದ್ದ ಸೂರ್ಯನ ಬದುಕಲ್ಲಿ ಅಪೂರ್ವಳ ಸಾಂಗತ್ಯ ಬೆಳಕು ಮೂಡಿಸಿತು. ಇವರಿಬ್ಬರ ನಡುವೆ ಬಂದ ಆದರ್ಶ ಅಪೂರ್ವಳನ್ನು ಇಷ್ಟಪಡ ತೊಡಗಿದ. ಇಡೀ ಸಮಾಜವೇಕೆ, ಮನೆಯವರ ತಿರಸ್ಕಾರಕ್ಕೊಳಗಾಗಿ ಮ್ರಗದಂತಾಗಿದ್ದ ಸೂರ್ಯನನ್ನು ಎಲ್ಲರೂ ಸ್ವೀಕರಿಸುವಂತೆ ಮಾಡಿದ ಅಪೂರ್ವಳ ಮುಂದೆ ಕಹಿಸತ್ಯವೊಂದು ಅನಾವರಣಗೊಂಡಿತ್ತು. ಸುಧಾ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿ ಇದು.  

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books