ತಂತಿ

Author : ರಾಜೇಂದ್ರ ಕಾರಂತ

Pages 64

₹ 50.00




Year of Publication: 2016
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

ರಾಜೇಂದ್ರ ಕಾರಂತ ಬರೆದ ನಾಟಕ-ತಂತಿ. ಲೇಖಕರ ಕುರಿತು ಸಾಹಿತಿ, ನಿರ್ದೆಶಕ ಟಿ.ಎನ್. ಸೀತಾರಾಮ 'ರಾಜೇಂದ್ರ ಕಾರಂತರು ನಾನು ಹೊಟ್ಟೆಕಿಚ್ಚು ಪಡುವಂತ ನಾಟಕಕಾರ' ಎನ್ನುತ್ತಾರೆ.

ಕೃತಿಯ ಬೆನ್ನುಡಿಯಲ್ಲಿ ಅವರು ’ನನಗೆ ಮೊದಲು ರಾಜೇಂದ್ರರ ಪರಿಚಯ ಅಷ್ಟೊಂದಿರಲಿಲ್ಲ, 15  ವರ್ಷಗಳ ಹಿಂದೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕೋತ್ಸವವೊಂದರಲ್ಲಿ ಅವರ ’ತಂದ” ಅನ್ನೋ ನಾಟಕ ನೋಡಿದ್ದೆ. ಅತ್ಯಂತ ಸೂಕ್ಷ್ಮ ಮನಸ್ಸಿನ ಹೆಣ್ಣೊಬ್ಬಳು ಎದುರಿಸುವ ಒಂದು ಸಂದಿಗ್ಧ ಸ್ಥಿತಿಯನ್ನು ಅಷ್ಟೇ ಸೂಕ್ಷ್ಮವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದರು. ನನಗೆ ಇವತ್ತಿಗೂ ಅನಾಥ ನಾಟಕಗಳು ಮನಸ್ಸಲ್ಲಿ ತುಂಬಾ ದಿನ ಉಳಿಯುವುದಿಲ್ಲ, ಆದರೆ, ತುಂಬಾ ಗಾಢವಾದ ಪರಿಣಾಮ ಬೀರುವ ನಾಟಕಗಳು ಮಾತ್ರ ಉಳಿಯುತ್ತವೆ. ರಾಜೇಂದ್ರ ಕಾರಂತರು ಬದುಕಿಗೆ ಹತ್ತಿರವಾದ ಕಥೆಯನ್ನು ನಾಟಕವಾಗಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ರಾಜೇಂದ್ರ ಕಾರಂತ

ರಂಗಭೂಮಿಯ ನಟ, ನಿರ್ದೇಶಕ, ನಾಟಕಕಾರ ರಾಜೇಂದ್ರ ಕಾರಂತ್, 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು  ರಚಿಸಿದ್ದಾರೆ. 1500ಕ್ಕೂ ಹೆಚ್ಚು ರಂಗ ಪ್ರಯೋಗಗಳ ರೂವಾರಿ, ನಾಟಕ ಸ್ಪರ್ಧೆಗಳಲ್ಲಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ಹುಟ್ಟಿದ್ದು ಕುಂದಾಪುರದ ಕೋಣಿ ಗ್ರಾಮದಲ್ಲಿ. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ.  ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ನಂತರ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಇವರ ಮೂರು ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ರೇಡಿಯೋ, ಟಿವಿ, ಚಲನಚಿತ್ರ ಮಾಧ್ಯಮಗಳಲ್ಲೂ ಸಾಕಷ್ಟು ಹೆಸರು ಮಾಡಿರುವ ಕಾರಂತರಿಗೆ 2008ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯನ್ನು ...

READ MORE

Related Books