ತಾಂತ್ರಿಕ ಪಂಥಗಳ ಹಿನ್ನಲೆಯಲ್ಲಿ ಸೂಳೆಕೆರೆ

Author : ಎಂ. ಚಿದಾನಂದಮೂರ್ತಿ

Pages 152

₹ 120.00




Year of Publication: 2017
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಬೆಂಗಳೂರು-18

Synopsys

ʼತಾಂತ್ರಿಕ ಪಂಥಗಳ ಹಿನ್ನಲೆಯಲ್ಲಿ ಸೂಳೆಕೆರೆʼ (ಶಾಂತಿನಗರ) ಕೃತಿಯನ್ನು ನಾಡೋಜ ಡಾ. ಎಂ. ಚಿದಾನಂದಮೂರ್ತಿ ರಚಿಸಿದ್ದಾರೆ. ಈ ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ದೊರಕಿದೆ. ಈ ಗ್ರಂಥದ ವಿಷಯಾನುಕ್ರಮಣಿಕೆಯಲ್ಲಿ ಕಾಪಾಲಿಕರು, ಮಧ್ಯಕಾಲೀನ ಕರ್ನಾಟಕದ ಕೆಲವು ರಹಸ್ಯ ತಾಂತ್ರಿಕ ಪಥಗಳು, ಮಹೇಶ್ವರ ಜ್ವರ-ಮಹೇಶ್ವರಿ ಉಪದ್ರ ಎಂದರೇನು?, ನೀಲಪಟ; ಒಂದು ಅಜ್ಞಾತ ತಾಂತ್ರಿಕ ಪಂಥ, ಬಾದುಬ್ಬೆ-ಬಾದುಮಯ್ಯ-ಬನಶಂಕರಿ ಪೆಟ್ಟಿಗೆ-ಲಜ್ಜಾಗೌರಿ, ಶೂಲದ ಹಬ್ಬ, ಸುಡುಗಾಡು ಸಿದ್ದರು, ಒಂದು ಮಣ್ಣಿನ ಬೋಗುರಿ, ಕೋಗಿಲೂರು ಮುಂತಾದ ಅನುಕ್ರಮಗಳನ್ನು ಹೊಂದಿದೆ.

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books