ತವನಿಧಿ (ತತ್ವಪದಗಳ ಸಂಕಲನ)

Author : ಎಂ.ಜಿ. ದೇಶಪಾಂಡೆ

Pages 136

₹ 120.00




Year of Publication: 2012
Published by: ಪ್ರಾಂಜಲಾ ಪ್ರಕಾಶನ
Address: # 15-03-102, ಲಕ್ಷ್ಮಿನಿಲಯ, ರಾಂಪೂರೆ ಕಾಲೊನಿ, ಮನ್ನಳ್ಳಿ ರಸ್ತೆ, ಬೀದರ-5854-3
Phone: 8971067233

Synopsys

ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಬರೆದ ತತ್ವಪದಗಳ ಸಂಕಲನ-ತವನಿಧಿ. 125 ತತ್ವಪದಗಳನ್ನು ಸಂಕಲಿಸಿದೆ. ಇಲ್ಲಿಯ ತತ್ವಪದಗಳಲ್ಲಿ ಭಕ್ತಿ ಇದೆ. ಜೀವನ ಗೂಢಾರ್ಥವಿದೆ. ಒಳ್ಳೆಯದು- ಕೆಟ್ಟದ್ದು ಬಗ್ಗೆ ವಿಶ್ಲೇಷಣೆ ಇದೆ. ಆ ಮೂಲಕ, ಒಳ್ಳೆಯದನ್ನು ಸ್ವೀಕರಿಸಬೇಕೆನ್ನುವ ಬೋಧೆ ಇದೆ. ಶ್ರೀಹರಿಯ ಸಾಕ್ಷಾತ್ಕಾರದ ಸಾಧನೆ ಮಾರ್ಗದಲ್ಲಿ ಸಾಗುವ ಲೇಖಕರ ಮನಸ್ಥಿತಿಯಲ್ಲಿ ತತ್ವಪದಗಳು ಮೂಡಿಬಂದಿವೆ. ಪ್ರತಿ ಕಾವ್ಯದಲ್ಲೂ ಭಗವದ್ಭಕ್ತಿ , ಜೀವನಮೌಲ್ಯ , ಸಾರ್ಥಕ ಭಾವಗಳು ತುಂಬಿದೆ. ದಾಸರ ಗೀತೆಗಳಂತೆ ಇವನ್ನೂ ಸಹ ಹಾಡಲು ಬರುವಂತೆ ಪ್ರಾಸಬದ್ಧವಾಗಿವೆ. ತವನಿಧಿ ,ಮುಂದೆಸಾಗು, ಜಗನ್ಮಾತೆ, ದೇಹಾತ್ಮಗಳ ಗೂಢತೆ, ಸನ್ನಡತೆಯಲ್ಲಿ ದೇವನಿಹನು, ಜೀವಶಿವ, ಮನ್ನಿಸು ದೇವ, ಶುದ್ಧಾತ್ಮ, ಸಂಸಾರಿ , ಸುಮ, ಏಕೆ ಹೀಗೆ ಕವಿತೆಗಳು ಇಲ್ಲಿವೆ .'ಆಸೆಗಳಿಗೆ ದಾಸನಾಗದಿರು ಮನುಜ ಕಷ್ಟಗಳಿಗೆ ನಿತ್ಯವೂ ಕೈಚಾಚು ನರದೇಹವು ನಿನ್ನದು ಶಾಶ್ವತ ವಲ್ಲವು ಮೋಹ ಸಂದೇಹಗಳಿಗೆ ಮರೆಮಾಚು" ಎನ್ನುವ ದೇಹ- ಆತ್ಮಗಳ ಗೂಢತೆಯ ಈ ಕವಿತೆಯಂತೆ ಎಲ್ಲ ಕವಿತೆಗಳಲ್ಲೂ ಆದರ್ಶ ಭಕ್ತಿ ಮನೆ ಮಾಡಿದೆ.ಅಧ್ಯಾತ್ಮಲೋಕದ ಪದಗಳ ಪುಂಜಗಳ ಸಾಲುಗಳಿವು ಎಂದು ಲೇಖಕರು ಹೇಳಿಕೊಂಡಿದ್ದಾರೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books