ತೇಜಸ್ವಿ ಕಥನ

Author : ಟಿ.ಪಿ. ಅಶೋಕ

Pages 148

₹ 135.00




Year of Publication: 2015
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಪೂರ್ಣಚಂದ್ರ ತೇಜಸ್ವಿ ಅವರ ಕಥೆ, ಕಾದಂಬರಿ, ಪ್ರಬಂಧ, ಪ್ರವಾಸಕಥನ ಮೊದಲಾದ ಬರಹಗಳನ್ನು ಒಟ್ಟಾಗಿ ಇಟ್ಟುಕೊಂಡು ತೇಜಸ್ವಿಯವರ ಕೃತಿಗಳ ಹಿಂದಿರುವ ದರ್ಶನವನ್ನು ಶೋಧಿಸುವ ಮಹತ್ತ್ವಾಕಾಂಕ್ಷೆಯಿಂದ ಪ್ರಸ್ತುತ ಕೃತಿ ಉದ್ಯುಕ್ತವಾಗಿದೆ. ತೇಜಸ್ವಿಯವರ ಬರಹಗಳಲ್ಲೇ ಕಾಣಸಿಗುವ ಬೌದ್ಧಿಕಲಹರಿಯನ್ನು ಅನುಸರಿಸುತ್ತ ಸಿದ್ಧಾಂತದ ಶಸ್ತ್ರಗಳನ್ನು ಝಳಪಿಸದೆ ಕೃತಿಯ ಮಾತುಗಳನ್ನೇ ಎತ್ತಿಕೊಂಡು ಅವುಗಳ ಮೂಲಕವೇ ವಿಮರ್ಶಾವಿವೇಕವನ್ನು ಹೆಣೆಯುವ ಕ್ರಮವನ್ನು ಈ ಕೃತಿಯು ಆವಿಷ್ಕರಿಸಿಕೊಂಡಿದೆ. ಟಿ.ಪಿ. ಅಶೋಕ ಅವರು ಕನ್ನಡದ ಹಲವಾರು ಲೇಖಕರ ಬಗ್ಗೆ ಇಂಥ ಅಧ್ಯಯನಗಳನ್ನು ಈಗಾಗಲೇ ನಡೆಸಿರುವುದರಿಂದ ಸಹಜವಾಗಿಯೇ ಈ ಕಥನದಲ್ಲಿ ಕನ್ನಡದ ಇತರ ಮಹತ್ತ್ವದ ಲೇಖಕರೂ ಕೂಡಿಕೊಳ್ಳುತ್ತಾರೆ. ಅವರೆಲ್ಲರ ನಡುವಿನ ಸಂಬಂಧದ ತಾತ್ತ್ವಿಕ ಭಿತ್ತಿಯ ಮೇಲೆ ಈ ಕಥನವು ತೇಜಸ್ವಿ ಕೃತಿಸಮೂಹದ ಆಪ್ತಾವಲೋಕನವೊಂದನ್ನು ನಮ್ಮ ಮುಂದಿಡುತ್ತದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books