ತೆಲುಗು ಸಾಹಿತ್ಯದಲ್ಲಿ ಬಸವಣ್ಣ (ಅನುವಾದ)

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 84

₹ 50.00




Year of Publication: 2016
Published by: ಜಗಜ್ಯೋತಿ ಅಣ್ಣ ಬಸವಣ್ಣ ಪತ್ತಿನ ಸೌಹಾರ್ದ ಸಹಕಾರ ಸಂಘ
Address: ಜಗಜ್ಯೋತಿ ಅಣ್ಣ ಬಸವಣ್ಣ ಪತ್ತಿನ ಸೌಹಾರ್ದ ಸಹಕಾರ ಸಂಘ ನಿಯಮಿತ, ಗಂಗಾವತಿ-583227

Synopsys

ವಚನ ಚಳವಳಿಯ ಪ್ರಮುಖರಾದ ಬಸವಣ್ಣನವರ ಕುರಿತು ತೆಲುಗಿನ ಸಾಹಿತ್ಯದಲ್ಲಿ ಏನಿದೆ? ಬಸವಣ್ಣವನು ತೆಲುಗು ಸಾಹಿತ್ಯದಲ್ಲಿ ನೋಡಿದ್ದೇಗೆ? ಇವೆಲ್ಲದ್ದಕ್ಕೂ ಜಾಜಿ ದೇವೇಂದ್ರಪ್ಪ ಅವರ ತೆಲುಗು ಸಾಹಿತ್ಯದಲ್ಲಿ ಬಸವಣ್ಣ ಅನುವಾದಿತ ಕೃತಿಯು ವಿವರಣೆ ಸಿಗುತ್ತದೆ. ವಾಸ್ತವ ಬದುಕಿನ ಅಭಿವ್ಯಕ್ತಿಯ ವಚನಗಳು ವೈಚಾರಿಕ ಜಗತ್ತನ್ನು ರೂಪಿಸುವ ವೇದಿಕೆಯನ್ನು ನಿರ್ಮಿಸಿವೆ. ವರ್ಗ-ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಹೊರಟ ವಚಳ ಚಳವಳಿಯ ಅರಿವನ್ನು ನಾವಿಲ್ಲಿ ತಿಳಿಯಬಹುದು. ರಾಜಕಾರಣ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಜನತಂತ್ರದ ಭಾಗವಾಗಿ ನೋಡಿದ ಕನ್ನಡದ ರಾಜಕೀಯ ಶಾಸ್ತ್ರಜ್ಞ ಬಸವಣ್ಣ. ಇವರ ಬಗ್ಗೆ ಭಾರತದ ಕವಿಗಳು ಅವರವರ ಭಾಷೆಯಲ್ಲಿ ಕೊಂಡಾಡಿ ಕಾವ್ಯ ರಚನೆ ಮಾಡಿದ್ದಾರೆ. ಆಂಧ್ರದಲ್ಲಿಯೂ ಇವರ ಬಗ್ಗೆ ಆಂಧ್ರದ ಕವಿ ಬರೆದಿರುವ ಕೃತಿಯನ್ನು ಕನ್ನಡದ ಓದುಗರ ಮುಂದಿಟ್ಟಿದ್ದಾರೆ ಜಾಜಿ ದೇವೇಂದ್ರಪ್ಪ ಅವರು.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books