ತೆರೆದ ಕಿಟಕಿ

Author : ಕೆ.ಎಸ್. ಮರಿಯಯ್ಯ‌ ಸ್ವಾಮಿ

Pages 104

₹ 100.00




Year of Publication: 2019
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌
Address: ಕೆಂಪೇಗೌಡನಗರ, 1ನೇ ಮೇನ್‌, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-91
Phone: 9739561334

Synopsys

ಲೇಖಕ ಕೆ.ಎಸ್.‌ ಮರಿಯಯ್ಯ ಸ್ವಾಮಿ ಅವರ ಹನಿಗವಿತೆಗಳ ಕೃತಿ ʻತೆರೆದ ಕಿಟಕಿʼ. ಬಿಡುವಿನ ಸಮಯದಲ್ಲಿ ರಚಿಸಿದ ಪುಟ್ಟ ಪುಟ್ಟ ಕವಿತೆಗಳ ಗುಚ್ಛವನ್ನು ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಇಲ್ಲಿನ ಯಾವ ಕವಿತೆಗಳಿಗೂ ಶೀರ್ಷಿಕೆಗಳಿಲ್ಲ. ಆದರೆ, ಕವಿತೆಗಳಲ್ಲಿ ಬದುಕಿನ ವಿವಿಧ ಮಜಲುಗಳಲ್ಲಿ ಲೇಖಕರು ಕಂಡ ಅನುಭವಗಳ ಸಾರವಿದೆ. ಪ್ರೀತಿ, ವಿರಹ, ನಿಸರ್ಗ, ಸಾಮಾಜಿಕ, ಶೈಕ್ಷಣಿಕ-ಹೀಗೆ ಹಲವಾರು ಸಂಗತಿಗಳಿಗೆ ದಕ್ಕಿದ ಭಾವಾಭಿವ್ಯಕ್ತಿಯನ್ನು ಹೊಂದಿವೆ.

About the Author

ಕೆ.ಎಸ್. ಮರಿಯಯ್ಯ‌ ಸ್ವಾಮಿ

ಕೆ.ಎಸ್. ಮರಿಯಯ್ಯ‌ ಸ್ವಾಮಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೊರ ಟೀಕೆರೆಯವರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್‌ ಆಗಿದ್ದು, ಪ್ರವೃತ್ತಿಯಲ್ಲಿ ಕವಿಯಾಗಿ ತೊಡಗಿಸಿಕೊಂಡಿದ್ದಾರೆ. ಇವರ ಹಲವಾರು ಕವನಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳೂ ಬಂದಿವೆ. ʻತೆರೆದ ಕಿಟಕಿʼ ಕವನ ಸಂಕಲನದ ಕೆಲವು ಕವನಗಳು ತಮಿಳು ಭಾಷೆಗೆ ಅನುವಾದಗೊಂಡಿವೆ. ಮರಿಯಯ್ಯ‌ ಅವರು ಕಟ್ಟಿದ ʻಅನ್ನಪೂರ್ಣ ಪ್ರತಿಷ್ಠಾನʼದಿಂದ ʻನಾಟಿ ಬೀಜʼ ಸಾಕ್ಷ್ಯಚಿತ್ರ, ನಾಡಿನ ಅಭಿವೃದ್ದಿಗೆ ಕೊಡುಗೆ ನೀಡಿದವರಿಗೆ ʻಸಂಪೂರ್ಣ ಪ್ರಶಸ್ತಿʼ ಮುಂತಾದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಕೃತಿಗಳು: ತೆರೆದ ಕಿಟಕಿ (ಹನಿಗವಿತೆಗಳ ಸಂಕಲನ) ...

READ MORE

Related Books