ಕಿತ್ತಾನೆ ರಂಗಣ್ಣ ನಾಗರಾಜ್ ರವರು ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕ, ಚಿಂತಕ. ಕಿ. ರಂ ಎಂದೇ ಪ್ರಸಿದ್ದಿಯಾದವರು. ಕನ್ನಡದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು. ಇವರು ಸಾವಿರಾರು ವರ್ಷಗಳಿಗೂ ಮೀರಿದ ಕನ್ನಡ ಸಾಹಿತ್ಯ ಚರಿತ್ರೆಯ ಹಲಬಗೆಯ ಸಾಹಿತ್ಯ ಕೃತಿಗಳನ್ನು ಅದ್ಭುತವಾಗಿ ಅನುಸಂಧಾನ ಮಾಡಿದ ವಿಶಿಷ್ಟ ವಿಮರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ನಟರಾಜ್ ಹುಳಿಯಾರ್ ರವರು ಸಂಪಾದಿಸಿರುವ ಕಿ.ರಂ ರವರ ಆಯ್ದ ಬರಹಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಈ ಕೃತಿಯೂ ಕಿ.ರಂ ರವರ ಚಿಂತನೆ ಹಾಗೂ ಸೃಜನಶೀಲತೆಯ ಎಲ್ಲಾ ಮಗ್ಗುಲುಗಳನ್ನೂ ಮಂಡಿಸುವ ಮಹತ್ವದ ಪ್ರಕಟಣೆಯಾಗಿ ಮೂಡಿಬಂದಿದೆ.
©2024 Book Brahma Private Limited.