ತೆರೆಮರೆಯ ಚಿತ್ರಗಳು

Author : ಎಂ.ವಿ. ಸೀತಾರಾಮಯ್ಯ

Pages 66




Year of Publication: 1941
Published by: ಕಾವ್ಯಾಲಯ ಪ್ರಕಾಶನ
Address: ಶಿವಮೊಗ್ಗ

Synopsys

ತೆರೆ ಮರೆಯ ಚಿತ್ರಗಳು -ಸಾಹಿತಿ ಎಂ.ವಿ. ಸೀತಾರಾಮಯ್ಯನವರು ಬರೆದ ಏಕಾಂಕ ನಾಟಕ. ವೇಶ್ಯೆಯ ಮಗಳು ಸುಶೀಲೆಯನ್ನು ರಮೇಶ ಎಂಬ ಕಥಾನಾಯಕ ಪ್ರೇಮಿಸುತ್ತಾನೆ. ತಾಯಿ ವೇಶ್ಯೆಯಾಗಿರುವುದಕ್ಕೂ ಆಕೆಯ ಪುತ್ರಿ ಒಬ್ಬ ಯುವಕನನ್ನು ಪ್ರೇಮಿಸುವುದಕ್ಕೂ ಏನು ಸಂಬಂಧ? ರಮೇಶ ಸಹ ಇಂತಹ ಆರೋಪಗಳಿಗೆ ಕಿವಿಗೊಡಲಾರ. ಇದು ಏಕಾಂಕ ನಾಟಕದ ವಸ್ತು.

ಮೃಚ್ಛಕಟಿಕ ನಾಟಕದಲ್ಲಿ ಚಾರುದತ್ತನು ವೇಶ್ಯೆಯಾದ ವಸಂತಸೇನೆಯನ್ನು ಮನೆಗೆ ಕರೆ ತರುತ್ತಾನೆ. ಅಂದು ಸಮಾಜ ಇಂತಹ ವಿದ್ಯಮಾನವನ್ನು ಒಪ್ಪಿಕೊಂಡಿತ್ತು. ಇಂದು ಸಮಾಜದ ವಿರೋಧವಿದೆ. ರಮೇಶ ಹಾಗೂ ಸುಶೀಲೆಯು ಚಾರುದತ್ತ-ವಸಂತಸೇನೆಗೆ ಸಮ ಎನ್ನುವುದು ಇದರರ್ಥವಲ್ಲ. ಆ ಪ್ರಸಂಗವನ್ನೇ ಹೋಲುವ ವಸ್ತುವನ್ನು ಈ ಏಕಾಂಕ ನಾಟಕ ಹೊಂದಿದೆ ಎನ್ನುವುದು -‘ತೆರೆಮರೆಯ ಚಿತ್ರಗಳು’ ನಾಟಕದಲ್ಲಿ ಮೂಡಿಬಂದಿದೆ.

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books