ತೇರು - ಪೂರೀಗಾಲಿ ಮುರುಡೇಶಮೂರ್ತಿ

Author : ಪೂರೀಗಾಲಿ ಮರಡೇಶಮೂರ್ತಿ

Pages 144

₹ 100.00




Year of Publication: 2015
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ.06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೇಕ್ಸ್, ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು-570004
Phone: 9449526390

Synopsys

ಕನ್ನಡ ಸಾಹಿತ್ಯ ಚರಿತ್ರೆ ಕುರಿತಂತೆ ಲೇಖಕರು ಬರೆದ ಆಯ್ದ ಬರಹಗಳು ಇಲ್ಲಿವೆ. ವಾಸ್ತವವಾಗಿ ಕನ್ನಡ ನಾಡಿನ ಸಾಹಿತ್ಯ ಚರಿತ್ರೆ ಬೆಳೆದು ಬಂದಿರುವ ಹಾದಿಯೇ ಒಂದು ವಿಕ್ರಮ. ಹಾಗೆಯೇ ಕನ್ನಡ ಚರಿತ್ರೆಯ ಶಾಸ್ತ್ರೀಯ ಸ್ಥಾನ ಮಾನದ ಹಿಂದಿನ ಶ್ರೇಷ್ಠತೆಯೂ ದೊಡ್ಡದು. ಅಂತಹ ಕೆಲವು ಮುಖ್ಯ ಸಂಗತಿಗಳನ್ನು 'ತೇರು' ತೆರೆದಿಡುವಲ್ಲಿ ಸಫಲವಾಗಿದೆ. ಪಂಪನ ಕಾವ್ಯ, ಕನ್ನಡ ಪುನರುಜ್ಜೀವನ, ದ್ರಾವಿಡ ಭಾಷೆಗಳು, ಕನ್ನಡ ಕಾವ್ಯ ಮೀಮಾಂಸೆ, ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಜಾನಪದ ಗೀತೆಗಳು ಕಾವ್ಯದ ಮೂರು ದನಿಗಳು, ಅಕ್ಕನ ವಚನಗಳು, ದಲಿತ -ಬಂಡಾಯ ಸಾಹಿತ್ಯ ಹೀಗೆ ಅನೇಕ ಸಾಹಿತ್ಯ ವಿಚಾರಗಳ ಮಗ್ಗಿಲನ್ನು ಈ ಕೃತಿ ಸಾರ್ಥಕ ಪಡಿಸುತ್ತದೆ. ಇಲ್ಲಿನ ಲೇಖನಗಳು ಬದುಕಿನ ಆಳ ಅಗಲ, ವಿಸ್ತಾರಗ ಳನ್ನು ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು, ಅಭಿವ್ಯಕ್ತಿಯನ್ನು ತಿಳಿಸಿಕೊಡುತ್ತದೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books