ತ್ಯಾಗಯೋಗಿ

Author : ಎಂ. ಎಚ್. ಕೃಷ್ಣಯ್ಯ

Pages 200

₹ 22.00




Year of Publication: 1994
Published by: ಗ್ರಾಮ ವಿದ್ಯಾ ಪ್ರಚಾರಕ ಸಂಘ
Address: ಕನಕಪುರ-562117, ಬೆಂಗಳೂರು ಗ್ರಾಮಾಂತರ ಜಿಲ್ಲೆ

Synopsys

ಹಿರಿಯ ಸಾಹಿತಿ ಡಾ. ಎಂ.ಎಚ್. ಕೃಷ್ಣಯ್ಯ ಅವರ ಕೃತಿ-ತ್ಯಾಗಯೋಗಿ. ಗ್ರಾಮೀಣ ಶಿಕ್ಷಣ ಸಂಸ್ಥೆಯ ಸ್ಥಾಪಕ ಎಸ್. ಕರಿಯಪ್ಪ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ. ಉರಿಯುವ ನೆಲ-ಬೆವರಿನ ಫಲ, ಬೆಳಕಿನ ಮೊಳಕೆ, ಬೆಳಕಿನ ಹಾದಿಯಲ್ಲಿ, ಸಂಕ್ರಮಣದ ಸಂಧಿಕಾಲ, ತ್ಯಾಗಯೋಗಿ, ದಯಾನಂದ ದರ್ಶನ, ಪ್ರಜಾಪ್ರತಿನಿಧಿಯ ಕಾಣ್ಕೆ, ಶಾಂತಿಧಾಮ: ನಿಸರ್ಗದ ಮಡಿಲಲ್ಲಿ, ಹೋರಾಟದ ಫಲ, ಬದುಕು ಬೇವು ಬೆಲ್ಲ, ಕರ್ಮಯೋಗಿ, ಕರಿಯಪ್ಪನವರ ಜೀವನದ ಪ್ರಮುಖ ಘಟ್ಟಗಳು...ಹೀಗೆ ವಿವಿಧ ಅಧ್ಯಾಯಗಳನ್ನು ಒಳಗೊಂಡಿವೆ.

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books