ಟಿಬೇಟಿಯನ್ನರ ಸತ್ತವರ ಪುಸ್ತಕ

Author : ಅಗ್ನಿ ಶ್ರೀಧರ್

Pages 72

₹ 45.00




Year of Publication: 2012
Published by: ಅಂಕಿತ ಪುಸ್ತಕ
Address: #53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

The Tibetan book of the dead-ಈ ಕೃತಿಯ ಸಂಕ್ಷಿಪ್ತ ರೂಪವೇ ಟಿಬೇಟಿಯನ್ನರ ಸತ್ತವರ ಪುಸ್ತಕ. ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರು ರಚಿಸಿದ್ದಾರೆ. ಮನುಷ್ಯನನ್ನು ತೀವ್ರವಾಗಿ ಕಾಡುವ ಸಂಗತಿಗಳ ಪೈಕಿ ಸಾವಿನ ನೆನಪು ನಿರಂತರ. ಸಾವಿಲ್ಲದಿದ್ದರೆ ಸಮಸ್ಯೆಗಳೂ ಇರುತ್ತಿರಲಿಲ್ಲ. ವಿದ್ಯೆ, ಸಂಪತ್ತು, ಯಶಸ್ಸು ಈ ಎಲ್ಲದಕ್ಕೂ ಸಾವು ಕೊನೆ ಹಾಡುತ್ತದೆ. ಇಂತಹ ವಿಚಾರ ಧಾರೆಯ ಟಿಬೇಟಿಯನ್ನರ ಧಾರ್ಮಿಕ ಕೃತಿ ಇದು. ಭಗವದ್ಗೀತೆ, ಬೈಬಲ್, ಕುರಾನ್‍ಗಳಂತೆ ಇದು 1927 ವರೆಗೂ ಧಾರ್ಮಿಕ ಕೃತಿಯಾಗಿಯೇ ಉಳಿದಿತ್ತು. ಟಿಬೇಟಿನಲ್ಲಿ ಮಕ್ಕಳಿಗೆ ಈ ಗ್ಳುರಂಥವನ್ನು ಬೋಧಿಸಲಾಗುತ್ತಿತ್ತು. 1927ರಲ್ಲಿ ಬ್ರಿಟನ್ನಿನಲ್ಲಿ ನೆಲೆಸಿದ್ದ ಆಸ್ಟ್ರಿಯನ್ ಡಬ್ಲ್ಯೂ.ವೈ. ಈವಾನ್ಸ್-ವೆಂಟ್ಜ್ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ, ಅದಕ್ಕೆ ಆ ಕಾಲದ ಜಗತ್ಪ್ರಸಿದ್ಧ ಮನೋತಜ್ಞ ಕಾರ್ಲ್ ಯೂಂಗ್ ಬರೆದ ವಿಸ್ತೃತವಾದ, ಪಾಂಡಿತ್ಯಪೂರ್ಣ ಮುನ್ನುಡಿಯಿಂದಾಗಿ ವಿಸ್ಮಯಕಾರಿ ಮನಃಶಾಸ್ತ್ರೀಯ ಗ್ರಂಥವೆನ್ನುವ ಖ್ಯಾತಿಯನ್ನು ಗಳಿಸಿತು. ಇಂದು ಈ ಕೃತಿಯನ್ನು ಆಧ್ಯಾತ್ಮಿಕ ಪಥದಲ್ಲಿರುವವರು ಮಾತ್ರವಲ್ಲದೆ ಕಲಾವಿದರು, ಖಗೋಳ ವಿಜ್ಞಾನಿಗಳು, ಸೂಫಿಗಳು ಹೀಗೆ ಎಲ್ಲರೂ ಓದುತ್ತಾರೆ. ಸಾವನ್ನು ಕುರಿತ ಪುಸ್ತಕವಾದರೂ ಬದುಕಿನ ಕ್ಷಣಗಳ ಕುರಿತು ಒಳನೋಟ ನೀಡುತ್ತದೆ.

About the Author

ಅಗ್ನಿ ಶ್ರೀಧರ್

ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...

READ MORE

Related Books