ಟೀಪು ಸುಲ್ತಾನ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 48

₹ 25.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 080-22161900

Synopsys

ಕರ್ನಾಟಕದ ಮೈಸೂರನ್ನು ಆಳಿದ ಪ್ರಮುಖ ದೊರೆಗಳಲ್ಲಿ ಟಿಪ್ಪು ಸುಲ್ತಾನ್ ಕೂಡ ಒಬ್ಬರು. ಬ್ರಿಟೀಷರ ವಿರುದ್ಧ ಹೋರಾಡಿ ಹಲವು ಬಾರಿ ಅವರನ್ನು ತನ್ನ ಸಂಸ್ಥಾನದ ಹೊರಗಟ್ಟಿದ ಧೀರ ಯೋಧ. ಇಂತಹ ಓರ್ವ ವ್ಯಕ್ತಿಯ ಕುರಿತು ವಿಶ್ವ ಮಾನ್ಯರು ಸರಣಿಯಲ್ಲಿ ಬಂದಂತಹ ಪುಸ್ತಕ ಟೀಪು ಸುಲ್ತಾನ. ಲೇಖಕರಾದ ಎಂ ಅಬ್ದುಲ್ ರೆಹಮಾನ್ ಪಾಷ ಈ ಪುಸ್ತಕದಲಲ್ಇ ಟಿಪ್ಪುವಿನ ವೀರಗಾಥೆಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಪರಮತ ಸಹಿಷ್ಣು. ಅನೇಕ ಹಿಂದು ದೇವಾಲಯಗಳಿಗೆ ಉದಾರ ದತ್ತಿದಾನಗಳನ್ನು ನೀಡಿದ್ದ. ಆಡಳಿತದಲ್ಲಿ ನಿಷ್ಠುರನಾಗಿದ್ದ ಟೀಪೂ ತಪ್ಪು ಯಾರೇ ಮಾಡಿದ್ದರೂ ಶಿಕ್ಷಿಸುತ್ತಿದ್ದ. ‘ನರಿಯಂತೆ ನೂರು ವರ್ಷ ಬದುಕುವುದಕ್ಕಿಂತ ಹುಲಿಯಂತೆ ಒಂದು ದಿನ ಬದುಕುವುದು ಮೇಲು‘ ಎಂದು ಸಾರಿ ಬ್ರಿಟಿಷರ ಮೋಸದ ಯುದ್ಧದಲ್ಲಿ ವೀರ ಸೈನಿಕನಾಗಿ ಹೋರಾಡಿ ಮಡಿದ. ಕತ್ತಿವರಸೆಯಲ್ಲಿ ಅಜೇಯನಾಗಿದ್ದ ಟೀಪು ಬಂದೂಕಿಗೆ ಸುಲಭವಾಗಿ ಬಲಿಯಾದ ಟಿಪ್ಪುವಿನ ಕುರಿತಾದ ಸಕಲ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯ. ಸರಳ ಕನ್ನಡದಲ್ಲಿ ಎಲ್ಲಾ ರೀತಿಯ ಓದುಗರು ಸುಲಭದಲ್ಲಿ ಅರ್ಥೈಸಿಕೊಳ್ಳುವಂತಹ ಭಾಷೆಯ ಉಪಯೋಗವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books