ತೋಂಟದ ಬಸವಣ್ಣ

Author : ನಿಷ್ಠಿ ರುದ್ರಪ್ಪ

Pages 396

₹ 200.00




Year of Publication: 2019
Published by: ಶ್ರೀಕೋಲ ಶಾಂತೇಶ್ವರ ಜನಕಲ್ಯಾಣ ಕೇಂದ್ರ ಪ್ರಕಾಶನ
Address: ಅರಸೀಕೆರೆ, ಹರಪನಹಳ್ಳಿ ತಾಲೂಕು. ಜಿಲ್ಲೆ ಬಳ್ಳಾರಿ

Synopsys

ಲೇಖಕರಾದ ನಿಷ್ಠಿ ರುದ್ರಪ್ಪ ಹಾಗೂ ಎಸ್.ಎಸ್. ಪಟ್ಟಣಶೆಟ್ಟಿ ಅವರು ಜಂಟಿಯಾಗಿ ಗದಗಿನ ತೋಂಟದಾರ್ಯ ಮಠದ ಜಗದ್ಗುರು ಶ್ರೀ ತೋಂಟದಾರ್ಯ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ಅವರ ಜೀವನ ಸಾಧನೆ ಕುರಿತು ಸಂಪಾದಿಸಿದ ಸಂಸ್ಮರಣಾ ಕೃತಿ-ತೋಂಟದ ಬಸವಣ್ಣ.ಹರಪನಹಳ್ಳಿ ತಾಲ್ಲೂಕಿನ ಶ್ರೀಕೋಲ ಶಾಂತೇಶ್ವರ ಜನಕಲ್ಯಾಣ ಕೇಂದ್ರ ಅರಿಸೀಕೆರೆ ಪ್ರಕಟಗೊಂಡಿದೆ. ಈ ಸಂಸ್ಮರಣಾ ಗ್ರಂಥವು 47 ಜನ ವಿದ್ವಾಂಸರ ಮತ್ತು ಜನ ಸಾಮಾನ್ಯರು ಸ್ವಾಮೀಜಿಗಳ ಒಡನಾಟವನ್ನು ಸ್ಮರಿಸಿದ ಲೇಖನಗಳನ್ನು ಹಾಗೂ ಸ್ವಾಮೀಜಿಯವರ ಕುರಿತು 16 ಜನ ಕವಿಗಳು ಬರೆದ ಕವನಗಳನ್ನು ಒಳಗೊಂಡ ಬೃಹತ್ ಗ್ರಂಥವಿದು. ತೋಂಟದ ಸಿದ್ಧಲಿಂಗೇಶ್ವರರನ್ನು ಬಸವಣ್ಣನೆಂದು ಕರೆಯಲಾಗುತ್ತದೆ. ಅದೇ ರೀತಿ, ಗದುಗಿನ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ‘ತೋಂಟದ ಬಸವಣ್ಣ’ನೆಂದು ಕರೆಯಲಾಗುತ್ತಿತ್ತು. ಅದಕ್ಕಾಗಿಯೇ ಈ ಕೃತಿಗೆ ‘ತೋಂಟದ ಬಸವಣ್ಣ’ ಎಂಬ ಶೀರ್ಷಿಕೆ ನೀಡಲಾಗಿದೆ. 

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books