ತ್ಯಾಗರಾಜ್ ಕಾಲೋನಿ

Author : ಕೌಶಿಕ್ ಕೂಡುರಸ್ತೆ

Pages 148

₹ 140.00




Year of Publication: 2021
Published by: ಸ್ನೇಹ ಬುಕ್ ಹೌಸ್
Address: ನಂ.165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು- 560050
Phone: 984531335

Synopsys

‘ತ್ಯಾಗರಾಜ್ ಕಾಲೋನಿ’ ಡಿಟೆಕ್ವಿವ್ ಹಿಮವಂತನ ಕೆಂಪು ಗುಲಾಬಿ ಕೇಸು, ಲೇಖಕ ಕೌಶಿಕ್ ಕೂಡುರಸ್ತೆ ಅವರ ಪತ್ತೇದಾರಿ ಕಾದಂಬರಿ. ಇದು ಕೌಶಿಕ್ ಅವರ ಮೂರನೆಯ ಪತ್ತೇದಾರಿ ಕಾದಂಬರಿಯಾಗಿದ್ದು, ಪತ್ತೇದಾರಿ ಸಾಹಿತ್ಯಕ್ಕೆ ಓದುಗರಿಲ್ಲ ಎಂಬ ಮಾತುಗಳನ್ನು ಈ ಹಿಂದಿನ ಎರಡು ಕಾದಂಬರಿಗಳು ಸುಳ್ಳುಮಾಡಿದ್ದು ಇಂದಿನ ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪಿ ಅಪ್ಪುತ್ತಾರೆ ಎಂಬುದನ್ನು ಬಲವಾಗಿ ನಂಬಿದ್ದೇನೆ ಎನ್ನುತ್ತಾರೆ.

ಲಾಕ್ ಡೌನ್ ಸಮಯದಲ್ಲಿ ಹೊಳೆದ ಎಳೆಯೊಂದಕ್ಕೆ ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿ ಕಾದಂಬರಿಯಾಗಿಸಿದ್ದೇನೆ ಎಂದು ತಿಳಿಸಿದ್ದಾರೆ. ಹಾಗೆಯೇ ದಿನಪತ್ರಿಕೆಗಳಲ್ಲಿ ಓದಿದ ಕೆಲವು ನೈಜ ಘಟನೆಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಇದೊಂದು ಕಾಲ್ಪನಿಕ ಕತೆಯಾಗಿದ್ದು ಯಾರ ಬದುಕಿಗೂ ಇದು ಸಂಬಂಧಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books