ಉಡುಪಿ ಜಿಲ್ಲೆಯ ಶತಮಾನದ ಕತೆಗಳು

Author : ಬಿ. ಜನಾರ್ದನ ಭಟ್



Year of Publication: 2007
Published by: ಉಡುಪಿ ಸ್ವಾಗತ ಸಮಿತಿ

Synopsys

‘ಉಡುಪಿ ಜಿಲ್ಲೆಯ ಶತಮಾನದ ಕತೆಗಳು’ (2007) ಡಾ. ಭಟ್ ಅವರು ಸಂಪಾದಿಸಿರುವ ಮಹತ್ವದ ಗ್ರಂಥ. ಕನ್ನಡದ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣ ಕತೆಯೂ ಒಂದು. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕತೆಗಳನ್ನು ಅತ್ಯಂತ ಸೊಗಸಾಗಿ ಸಂಪಾದಿಸಿಕೊಟ್ಟಿದ್ದು ಇದನ್ನು 74 ನೆಯ ಕನ್ನಡ ಸಮ್ಮೇಳನ (2007) ದ ಉಡುಪಿ ಸ್ವಾಗತ ಸಮಿತಿ ಪ್ರಕಟಿಸಿದೆ. “ದಕ್ಷಿಣ ಕನ್ನಡದವರಿಗೆ ರಾಜ್ಯದ ಬೇರೆ ಕಡೆಗಳಲ್ಲಿ ಸಿಗದ ವಿಶೇಷ ಅನುಭವಗಳಿವೆ. ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಅನುಭವ, ಗಾಂಧಿವಾದ, ಸಮಾಜ ಸುಧಾರಣೆಗಳು, ಅಸ್ಪೃಶ್ಯತಾ ನಿವಾರಣೆ, ವಿವಿಧ ಸಮುದಾಯಗಳು, ಜಾತಿಗಳು, ಮತಧರ್ಮಗಳು ಮತ್ತು ಅವುಗಳನ್ನು ಅನುಸರಿಸುವವರ ಸುಖ ಕಷ್ಟಗಳು, ದುಡಿದರೆ ಮಾತ್ರ ಉಣ್ಣಬಹುದಾದ ಕರ್ಮಭೂಮಿಯಾದ ಈ ಜಿಲ್ಲೆಯ ಜನ ಉದ್ಯೋಗಾರ್ಥವಾಗಿ ವಲಸೆ ಹೋಗಬೇಕಾದುದು, ಸ್ವಾತಂತ್ಯ್ರಾನಂತರದ ರಾಜಕಾರಣ, ಮತೀಯ ಸಾಮರಸ್ಯ ಹದಗೆಡುತ್ತಾ ಹೋದ ವಿಚಾರ, ಭೂತ-ನಾಗ-ದೈವ-ದೇವರುಗಳ ರಾಜ್ಯವಾದ ಈ ಜಿಲ್ಲೆಯಲ್ಲಿ ಅವುಗಳ ಜತೆಗೆ ಜನರ ಸಹಬಾಳ್ವೆ, ಇವೆಲ್ಲವುಗಳ ನಡುವೆ ವ್ಯಕ್ತಿ ವೈಶಿಷ್ಟ್ಯ - ಸನ್ನಿವೇಶ ವಿಶೇಷಗಳಿಂದ ಕೂಡಿದ ಇಲ್ಲಿನ ಸಾಮಾನ್ಯರ ಬದುಕು - ಎಲ್ಲವೂ ನಮ್ಮ ಕತೆಗಳಲ್ಲಿ ದಾಖಲಾದ ರೀತಿಯನ್ನು ತೋರಿಸಲು ಈ ಪ್ರಾತಿನಿಧಿಕ ಕತೆಗಳು ನೆರವಾಗುತ್ತವೆ”, ಎಂಬ ನಿಲುವಿನಲ್ಲಿ ತಥ್ಯವಿದೆ. ಕನ್ನಡ ಕತೆಗಳ ಸಂಪಾದನ ಕಾರ್ಯ ಹೇಗೆ ನಡೆಯಬೇಕು ಎಂಬುವುದಕ್ಕೂ ಪ್ರಸ್ತುತ ಕೃತಿ ಮಾದರಿಯಾಗಿದೆ ಎಂಬುದು ಡಾ. ಜಿ. ಎನ್. ಉಪಾಧ್ಯ ಅವರ ಮಾತು.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books