ಉಡುಪಿಯ ಪರಿಸರದಲ್ಲಿ ಪಾವೆಂ. ಆಚಾರ್ಯರು

Author : ಶ್ರೀನಿವಾಸ ಹಾವನೂರ

Pages 190

₹ 88.00




Year of Publication: 2001
Published by: ಪ್ರಸಾದನ ಪ್ರಕಾಶನ
Address: ಬೆಂಗಳೂರು-ಮಂಗಳೂರು

Synopsys

ಚಿಂತಕ ಪಾ.ವೆಂ. ಆಚಾರ್ಯರು ವಿದ್ವಾಂಸರು. ಲೋಕಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಲಾಂಗೂಲಾಚಾರ್ಯರು ಎಂಬ ಕಾವ್ಯನಾಮದೊಂದಿಗೆ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದ ಅವರು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿದ್ದರು. ಈ ಕೃತಿಯಲ್ಲಿ ಶ್ರೀಕೃಷ್ಣ ಮಠದ ಪರಿಸರ, ವ್ಯಕ್ತಿಚಿತ್ರಗಳು, ಶಬ್ದವಿಹಾರ ಹಾಗೂ ನೆನಹುಗಳು ಹೀಗೆ ನಾಲ್ಕು ವಿಭಾಗಗಳನ್ನು ಮಾಡಿದ್ದು, ಮೊದಲನೆಯದರಲ್ಲಿ ಹುಲಿ ಕೊಂದ ಸ್ವಾಮಿಗಳು, ಮಠಾಧಿಪತ್ಯಕ್ಕೆ ಮೇಲಾಟವಿರಲಿಲ್ಲ, ರಥದಿಂದ ಧುಮುಕಿದ ಸ್ವಾಮಿಗಳು, ಸೋದೆಯ ನೆನಪುಗಳು ಇತ್ಯಾದಿ, ಎರಡನೆಯದರಲ್ಲಿ; ಗೋವಿಂದ ಪೈಗಳೊಂದಿಗೆ, ಶಿವರಾಮ ಕಾರಂತ ಪ್ರಪಂಚ, ಡಾ. ಟಿ. ಮಾಧವ ಪೈ, ಉಡುಪಿಯ ಕೆಲ ಪತ್ರಕರ್ತರು ಇತ್ಯಾದಿ ಮೂರನೇಯದರಲ್ಲಿ; ಸಾಮಾನ್ಯ ತುಳು ಬ್ರಾಹ್ಮಣ ತುಳು, ಪುತ್ತೂರು ಶಬ್ದ ವಿವೇಚನೆ, ಶಿವಳ್ಳಿ ಮತ್ತು ಶಿವರೂಪ ಇತ್ಯಾದಿ ಹಾಗೂ ನಾಲ್ಕನೆಯದರಲ್ಲಿ; ನನ್ನ ಪತಿ (ಲಕ್ಷ್ಮಿಬಾಯಿ ಪಾವೆಂ), ನನ್ನ ಉಡುಪಿಯ ಜೀವನ (ಪಾ.ವೆಂ), ಬದಲಾಗಿದೆ ಉಡುಪಿ ಇತ್ಯಾದಿ ಲೇಖನಗಳಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books