ಉಳಿದಾವ ಮಾತು

Author : ರಘುನಾಥ ಚ ಹ

Pages 205

₹ 200.00




Year of Publication: 2021
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ-583120, ಸಿರಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ
Phone: 8762479216

Synopsys

ರಘುನಾಥ ಚ.ಹ. ಹಾಗೂ ಪದ್ಮನಾಭ ಭಟ್ ಶೇವ್ಕಾರ ಅವರ ಕೃತಿ-ಉಳಿದಾವ ಮಾತು. ಕೃತಿಯಲ್ಲಿ ಚಂದನವನದ ಕಥೆಗಳನ್ನು ತಿಳಿಸುವ ದೊಡ್ಮನೆಯ ರಾಘವೇಂದ್ರ ರಾಜಕುಮಾರ ಅವರೊಂದಿಗಿನ ಸಂದರ್ಶನವಿದೆ. ದೊಡ್ಮನೆಯ ಸಂಗತಿಗಳು ಇಲ್ಲಿವೆ. ಪ್ರತಿಭಾವಂತ ನಿರ್ದೇಶಕರಾದ ಸತ್ಯಪ್ರಕಾಶ್, ಹೇಮಂತರಾವ್, ಅರವಿಂದ ಶಾಸ್ತ್ರೀ ಮುಂತಾದವರೊಂದಿಗಿನ ಸಂವಾದಗಳಿವೆ. ಕನ್ನಡ ಸಿನಿಮಾ ಲೋಕದ ವಿವಿಧ ಮಹತ್ವದ ಘಟ್ಟಗಳನ್ನು ಸೆರೆ ಹಿಡಿಯುವ ಪ್ರಯತ್ನ ಇಲ್ಲಿದೆ. ಕನ್ನಡ ಚಲನಚಿತ್ರ ರಂಗದ ಅಧ್ಯಯನಕ್ಕಾಗಿ ಉತ್ತಮ ಆಕರ ಗ್ರಂಥವೂ ಆಗಿದೆ. ಕನ್ನಡ ಸಿನೆಮಾ ಜಗತ್ತಿಗೆ ಕೊಡುಗೆ ನೀಡಿದ ನಿರ್ದೇಶಕರ, ಸಂಗೀತಗಾರರ, ನಟರ, ಗಾಯಕರು ಹೀಗೆ ಎಲ್ಲರನ್ನೂ ಮಾತಾಡಿಸಿದರೂ ಮತ್ತೇ ಮತ್ತೆ ಉಳಿಯುವ ಮಾತುಗಳಾಗಿ ಈ ಕೃತಿ ಗಮನ ಸೆಳೆಯುತ್ತದೆ.   

About the Author

ರಘುನಾಥ ಚ ಹ
(01 October 1974)

ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...

READ MORE

Related Books