ಉಲ್ಲಾಸ

Author : ಕೆ. ಮರುಳಸಿದ್ದಪ್ಪ

Pages 196

₹ 115.00




Year of Publication: 2013
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

'ಉಲ್ಲಾಸ' ಬಿಡಿ ಬರಹಗಳ ಸಂಕಲನ. ಈ ಕೃತಿಯು ಸಾಹಿತ್ಯ, ರಂಗಭೂಮಿ, ರಾಜಕೀಯ, ಧಾರ್ಮಿಕ, ವಿಜ್ಞಾನ, ಇತ್ಯಾದಿ ವಿಷಯ ವಿಚಾರಗಳಿಗೆ ಸಂಬಂಧಿಸಿದ ಕೃತಿ-ಸಂಗತಿಗಳನ್ನು ಕುರಿತ ಸೂಕ್ಷ್ಮ ನಿರೀಕ್ಷಣೆ ಇದೆ.

ಪಠ್ಯ ಕೇಂದ್ರಿತವಾಗಿ ಮಾತನಾಡುತ್ತಲೇ ಪಠ್ಯ ಒಳಗೊಂಡ ಜಗತ್ತಿನ ಅನ್ಯ ವಿವರಗಳ ನೆನಪುಗಳಲ್ಲಿ ವಿಸ್ತರಿಸಿಕೊಳ್ಳುವ ವಿಚಾರ ವಿಮರ್ಶೆ, ಉಲ್ಲಾಸಗೊಂಡ ಮನಸ್ಸಿನ ಆರ್ದ್ರ ಭಾವದ ಔಚಿತ್ಯದಲ್ಲಿ ಅರಳಿದೆ. ’ಅಂತಿಗೊನೆ’ ಯ ಸಮಕಾಲೀನ ಮಹತ್ವ, ಮುಂಜಾವು ಅಗಮೆಮ್ಯಾನ್, ಜಗತ್ತಿನ ಪ್ರಥಮ ಯುದ್ಧವಿರೋಧಿ ನಾಟಕ, ಗಾಂಧಿ ವಿರುದ್ದ ಗಾಂಧಿ-ಒಂದು ವಾಗ್ವಾದ, ಸೂರ್ಯಶಿಕಾರಿಯ ಕನ್ನಡ ಅನುವಾದ, ಸಂಸ ಕವಿ ವಿಶಿಷ್ಟ ಪರಿಚಯ, ಗ್ರಂಥ ನೇರ ನಿರೂಪಣೆಯ ಜೀವನಕಥೆ, ಕಲೆಯೇ ಕಾಯಕ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ;,ಜನಪ್ರಿಯ ವಿಜ್ಞಾನಕ್ಕೊಂದು ಮಾದರಿ ಗ್ರಂಥ, ಚರಿತ್ರಕಾರರಿಗೊಂದು ಆಕರ ಗ್ರಂಥ, ಒಂದು ಅನನ್ಯ ಜೀವನ ಚರಿತ್ರೆ, ಶಾಂತವೇರಿಯ ಅಶಾಂತ ಸಂತನ ಹೆಜ್ಜೆಗಳು, ಸಮಕಾಲೀನ ವಾಸ್ತವದ ಬೆಳಕಿನಲ್ಲಿ ಇಂಡಿಯಾದ ಕೈವ್, ಶಾಮಣ್ಣ, ನಿರೂಪಣೆಯಲ್ಲಿ ಹೊಸತನ ಪ್ರಾದೇಶಿಕ ಸಂಸ್ಕೃತಿಯ ಕಥನ; 'ಅಮ್ಮಜ್ಜಿಯ ಮ್ಯಾಗ್ಗುಂಡಿ' ಮುಂತಾದ ಲೇಖನಗಳು ಕೃತಿಯಲ್ಲಿವೆ. 

About the Author

ಕೆ. ಮರುಳಸಿದ್ದಪ್ಪ
(12 January 1940)

ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು. ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಅವರ ಪ್ರಕಟಿತ ಪುಸ್ತಕಗಳು. 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಅವರು  ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡೀಕರಿಸಿದ್ದಾರೆ. ಕಿ.ರಂ. ನಾಗರಾಜ ಅವರ ಜೊತೆ ಸೇರಿ ’ವಚನ ಕಮ್ಮಟ’ ಸಂಪಾದಿಸಿದ್ದಾರೆ. ...

READ MORE

Related Books