ಉಪನಿಷತ್ಪ್ರಕಾಶ

Author : ರಂಗನಾಥ ದಿವಾಕರ

Pages 260




Year of Publication: 1945
Published by: ಬೋಧರಾವ ರಾಮಚಂದ್ರ ದಿವಾಕರ
Address: ಅಧ್ಯಾತ್ಮ ಕಾರ್ಯಾಲಯ, ಹುಬ್ಬಳ್ಳಿ

Synopsys

ರಂಗನಾಥ ದಿವಾಕರ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿ-ಉಪನಿಷತ್ಪ್ರಕಾಶ. 1925 ಹಾಗೂ 1927ರಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣ ಕಂಡಿದೆ. ಈಶೋಪನಿಷತ್, ಕೇಸೋಪನಿಷತ್, ಕಠೋಪನಿಷತ್, ಮಾಂಡೂಕ್ಯೋಪನಿಷತ್, ಪ್ರಶ್ನೋಪನಿಷತ್, ಮುಂಡಕೋಪನಿಷತ್, ಐತರೇಯೋಪನಿಷತ್, ತೈತ್ತರಿಯೋಪನಿಷತ್ ಗಳನ್ನು ಕನ್ನಡದಲ್ಲಿ ಸುಲಭವಾಗಿ ತಿಳಿಯುವಂತೆ ಅನುವಾದಿಸಲಾಗಿದೆ. ಉಪನಿಷತ್ತುಗಳು ನಿಗೂಢ ಜೀವನದ ಅಂತಿಮ ಸತ್ಯವನ್ನೇ ಹೇಳುತ್ತವೆ. ಇವುಗಳಿಗೆ ಅಮರತ್ವ ಇದೆ. ಜೀವನ ಸಾರ್ಥಕತೆಯ ತಿರುಳಿದೆ. ಇಂತಹ ಜ್ಞಾನವನ್ನು ಕನ್ನಡಿಗರಿಗೆ ಸಿಗುವಂತೆ ಮಾಡಿರುವುದು ಲೇಖಕರ ಬಹು ದೊಡ್ಡ ಕೊಡುಗೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books