ಉಪ್ಪಿನ ಗೊಂಬೆ

Author : ಚಂದ್ರಕಾಂತ ಕರದಳ್ಳಿ

Pages 50

₹ 30.00




Published by: ವಿಚಾರ ಪ್ರಕಾಶನ
Address: 'ಶಿವ ಪ್ರಸಾದ’, ಲಕ್ಷ್ಮೀ ನಗರ, ಶಹಾಪುರ- 585223
Phone: 08419-243192 / 9448595212

Synopsys

ಉಪ್ಪನ್ನು ತಯಾರಿಸುವ ಒಂದು ಮಡಿಯಲ್ಲಿ ತಾನಾಗಿ ರೂಪುಗೊಂಡ ಒಂದು ಉಪ್ಪಿನಗೊಂಬೆ ಊರು ತಿರುಗಲು ಹೊರಡುತ್ತದೆ. ಹೀಗೆ ಹೊರಟ ಗೊಂಬೆ, ಚನ್ನಪಟ್ಟಣ ತಲುಪಿ ಅಲ್ಲಿಯ ಮರದ ಗೊಂಬೆಗಳ ನಡುವೆ ಸೇರಿ ಅವುಗಳ ಸ್ನೇಹ ಬೆಳೆಸಿಕೊಂಡು ಆ ಗೊಂಬೆಗಳಿಗೆ ಸಮುದ್ರದ ಬಗ್ಗೆ ತಿಳಿಸಿ ಅವುಗಳನ್ನ ಕರೆದುಕೊಂಡು ಪ್ರವಾಸ ಹೊರಡುತ್ತದೆ. ಹೀಗೆ ಹೊರಟ ಗೊಂಬೆಗಳು ತಾವು ಹುಟ್ಟಿದ ಕಾಡನ್ನು ನೋಡುತ್ತವೆ, ಕೊನೆಗೆ ಉಪ್ಪಿನಗೊಂಬೆ ತನ್ನ ನೆಲೆಯಾದ ಸಮುದ್ರಕ್ಕೆ ಗೊಂಬೆಗಳನ್ನು ಕರೆತರುತ್ತದೆ. ಮಕ್ಕಳನ್ನು ಕಲ್ಪನಾಲೋಕದಲ್ಲಿ ತೇಲಿಬಿಡುವ ರಮ್ಯತೆ ಇಲ್ಲಿನ ಕತೆಗೆ ಇದೆ. 

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books