ಊರ ಸುಟ್ಟರೂ ಹನುಮಪ್ಪ ಹೊರಗ

Author : ಹನುಮಂತ ಹಾಲಿಗೇರಿ

₹ 10.00




Year of Publication: 2016

Synopsys

ಲೇಖಕ ಹನುಮಂತ ಹಾಲಗೇರಿ ಅವರ ನಾಟಕ ಕೃತಿ ʻಊರ ಸುಟ್ಟರೂ ಹನುಮಪ್ಪ ಹೊರಗʼ. ಲೇಖಕ ಡಾ. ಕೆ.ವೈ.ನಾರಾಯಣಸ್ವಾಮಿ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಕರ್ನಾಟಕದ ವರ್ತಮಾನದ ಆಧುನಿಕ ನಡೆಗಳನ್ನು ಗ್ರಹಿಸಿ ನಿರೂಪಿಸುತ್ತಿರುವ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ ಹನುಮಂತ ಹಾಲಗೇರಿ. ಬದುಕಿನ ಜೀವ ಚೈತನ್ಯವನ್ನು ಪ್ರಭುತ್ವ, ಜಾತಿ, ಧರ್ಮ ಮತ್ತು ಮಾರುಕಟ್ಟೆಯ ಆರ್ಥಿಕ ಯಾಜಮಾನ್ಯಗಳು ನಿಯಂತ್ರಿಸುತ್ತಿರುವ-ಬಲಗೊಳ್ಳುತ್ತಿರುವ ಹೊರ-ಒಳ ವಿನ್ಯಾಸಗಳನ್ನು ಬೆಂಬತ್ತಿ ಬರೆಯುವುದನ್ನು ಹನುಮಂತನ ಪೆನ್ನು ರೂಢಿಸಿಕೊಂಡಿದೆ. ಪ್ರತಿಯೊಬ್ಬ ಸಂವೇದನಾಶೀಲ ಲೇಖಕ ಹೊಸ ವಸ್ತುವನ್ನು ಹುಡುಕುವಂತೆ ಹೊಸ ಸಂವಹನ ಮಾಧ್ಯಮವನ್ನು ಹುಡುಕುತ್ತಿರುತ್ತಾನೆ. ಸಮುದಾಯಗಳ ಜೊತೆ ಮುಖಾಮುಖಿಯಾಗಲು ಹಂಬಲಿಸುವ ಲೇಖಕ ಅಥವಾ ಲೇಖಕಿ ನಾಟಕದಂತಹ ಮಾಧ್ಯಮವನ್ನು ತನ್ನ ಸಂವಾದಕ್ಕೆ ಬಳಸಿಕೊಳ್ಳುವುದು ಸಹಜ. ಹನುಮಂತ ನಾಟಕಕಾರನಾಗಿ ರಂಗಪ್ರವೇಶ ಮಾಡಿರುವುದು ಕೂಡ ತನ್ನ ಸೃಜನಶೀಲ ವ್ಯಕ್ತಿತ್ವದ ವಿಸ್ತರಣೆಯಾಗಿದೆ. 'ಊರು ಸುಟ್ಟೂ ಹನುಮಪ್ಪ ಹೊರಗ..' ನಾಟಕ ಗ್ರಾಮ ಜೀವನದ ಸಾಮೂಹಿಕ ನೆನಪಿನ ಭಾಗವಾಗಿದ್ದ ಹನುಮಪ್ಪ ದೇವರು ನಿರಾಶ್ರಿತನಾಗುವ ಪರಿಯನ್ನು ನಿರೂಪಿಸುವ ಒಂದು ಹೊಸ ರೂಪಕವಾಗಿದೆ. ಗೋಳಿಕರಣದ ಆರ್ಥಿಕ ರಾಜಕೀಯ ವಿದ್ಯಮಾನಗಳು ನಮ್ಮ ಹಳ್ಳಿಗಳ ಸಹಜ ಜೀವನವನ್ನು ಲಯ ತಪ್ಪಿಸುತ್ತಿರುವ ದುರಂತವನ್ನು ಈ ನಾಟಕ ಕಟ್ಟಿಕೊಡುತ್ತದೆ. ನಾಟಕ ಕಟ್ಟುವಾಗ ಕಥೆಗಾರ ಮುನ್ನೆಲೆಗೆ ಬರದಂತೆ ಹನುಮಂತ ಅವರು ಎಚ್ಚರವಹಿಸಿದರೆ ಅವರ ನಾಟಕ ಯಾನವು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ” ಎಂದು ಹೇಳಿದ್ದಾರೆ.

About the Author

ಹನುಮಂತ ಹಾಲಿಗೇರಿ
(20 October 1980)

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...

READ MORE

Related Books