ಉತ್ಕೃಷ್ಟತೆಯ ಮಾರ್ಗದಲ್ಲಿ ಗರ್ಜಿಸುತ್ತಾ ಮುನ್ನುಗ್ಗಿರಿ

Author : ಸ್ವಾಮಿ ಸುಖಬೋಧಾನಂದ

Pages 170

₹ 113.00




Year of Publication: 2006
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ಬರೆದ ಕೃತಿ-ಉತ್ಕೃಷ್ಟತೆಯ ಮಾರ್ಗದಲ್ಲಿ ಮುನ್ನುಗ್ಗಿರಿ. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಎದೆಗುಂದಬಾರದು. ಏಕೆಂದರೆ, ಇಂತಹ ಸನ್ನಿವೇಶವೇ ವ್ಯಕ್ತಿಯೊಬ್ಬರ ಅಭಿವೃದ್ಧಿಗೆ ಕಾರಣವಾಗಿರುತ್ತದೆ. ಇಂತಹ ಅವಕಾಶವನ್ನುಧೈರ್ಯದಿಂದ ಎದುರಿಸಿದರೆ ವ್ಯಕ್ತಿಯ ಉನ್ನತಿ ಸಾಧ್ಯವಾಗುತ್ತದೆ. ಈ ಅವಕಾಶ ತಪ್ಪಿಸಿಕೊಂಡರೆ ಆ ವ್ಯಕ್ತಿ ಎಂದಿಗೂ ಪ್ರಗತಿ ಹೊಂದಲಾರ. ನಿಮ್ಮ ದಾರಿ ಉತ್ಕೃಷ್ಟವಾಗಿದೆ ಎಂದು ಕಂಡುಕೊಂಡರೆ ಸಾಕು ಆ ಮಾರ್ಗದಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು. ಅದುವೇ ಯಶಸ್ಸಿನ ಮಾರ್ಗವಾಗಿರುತ್ತದೆ ಎಂಬ ಪ್ರೇರಣಾತ್ಮಕ ಬರೆಹಗಳು ಇಲ್ಲಿವೆ. ಈ ಕೃತಿಯು ಅಂತಾರಾಷ್ಟ್ರೀಯವಾಗಿ ಓದುಗರ ಗಮನ ಸೆಳೆದಿದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books