ಉತ್ತರಯಾನ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 200

₹ 150.00




Year of Publication: 2019
Published by: ಉದಯ ಪ್ರಕಾಶನ
Address: #984, 11ನೇ ಬಿ-ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು-560010
Phone: 08023389143

Synopsys

ಮಹಾಲಿಂಗರಂಗನ ಅನುಭವಾಮೃತ ಕುರಿತು ವಿಜಯವಾಣಿ ಪತ್ರಿಕೆಯ ’ಅನುಭಾವದ ಬೆಳಗು’ ದಲ್ಲಿ ಬರೆದ ಅಂಕಣ ಬರೆಹವೇ ’ಉತ್ತರಯಾನ ಅಧ್ಯಾತ್ಮಿಕಾನುಸಂಧಾನ’. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಕೃತಿಯ ಕರ್ತೃ. ಅಂತರ್ ಜ್ಯೋತಿಯನ್ನು ಅಂಗೈ ನೆಲ್ಲಿಕಾಯಿಯಾಗಿಸುವ ಪರಿ ಹೇಗೆ ಎಂಬುದನ್ನು ತೋರುವ ಮಹಾಪಥಿಕನ ಯಾನವೇ ”ಉತ್ತರಯಾನ’ ವಾಗಿದೆ. ಮಹಾಲಿಂಗರಂಗನೊಂದಿಗೆ ಮುಖಾಮುಖಿಯಾಗುತ್ತಾ ಆತನ ರೂಪಕ ಭಾಷೆಯನ್ನು ಸರಳವಾಗಿ ದಾಖಲಿಸುವ ಪ್ರಯತ್ನ ಇಲ್ಲಿದೆ. ಸಂಯಮ ಮೀರದ ಶಾಸ್ತ್ರ ಭಾಷೆ, ನಾದಲಯ ತುಂಬಿಕೊಂಡು, ಹಿತವಾಗುವ ಕಾಂತಾಸಂಹಿತ ಹಿತೋಕ್ತಿ ವಿಧಾನ, ಕೊನೆಯ ಟಿಪ್ಪಣಿಗಳ ಲೋಕದರ್ಶನ ಈ ಕೃತಿಯ ಧನಾತ್ಮಕ ಅಂಶಗಳು.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books