ವಚನ ಕಮ್ಮಟ

Author : ಕಿ.ರಂ. ನಾಗರಾಜ

Pages 188

₹ 110.00




Year of Publication: 2017
Published by: ಸಪ್ನ ಬುಕ್ ಹೌಸ್

Synopsys

ಹಿರಿಯ ವಿಮರ್ಶಕ ಕಿ.ರಂ. ನಾಗರಾಜ ಅವರು ಮತ್ತೊಬ್ಬ ವಿದ್ವಾಂಸ ಕೆ. ಮರುಳಸಿದ್ದಪ್ಪ ಅವರ ಜೊತೆ ಸೇರಿ ಸಂಪಾದಿಸಿ ಪ್ರಕಟಿಸಿದ ಕೃತಿ. ಹನ್ನೆರಡನೆಯ ಶತಮಾನದಲ್ಲಿ ಚಳುವಳಿಗೆ ಕಾರಣವಾದ ವಚನ ಸಾಹಿತ್ಯವನ್ನು ಕುರಿತ ಲೇಖನಗಳನ್ನು ಈ ಸಂಕಲನ ಒಳಗೊಂಡಿದೆ. ವಿದ್ವಾಂಸರ ಅಪರೂಪದ ಲೇಖನಗಳನ್ನು ಸಂಕಲಿಸಿ ನೀಡಿರುವ ಈ ಬರಹಗಳು ವಚನಗಳ ಓದಿಗೆ ವಿಭಿನ್ನ ಒಳನೋಟಗಳನ್ನು ನೀಡುತ್ತವೆ.

About the Author

ಕಿ.ರಂ. ನಾಗರಾಜ
(05 December 1943 - 07 August 2010)

ಕನ್ನಡ ವಿಮರ್ಶಾಲೋಕದಲ್ಲಿ ಕಿ.ರಂ. ಎಂದೇ ಚಿರಪರಿಚಿತರಾಗಿದ್ದರು ಕಿತ್ತಾನೆ ರಂಗಣ್ಣ ನಾಗರಾಜ್ ಅವರು. ಅಪಾರ ಶಿಷ್ಯವರ್ಗ ಹೊಂದಿದ್ದ ಕಿ.ರಂ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರ ಶಿಷ್ಯವರ್ಗದಲ್ಲಿ ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳಿಗಿಂತ ಕಾವ್ಯಾಸಕ್ತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಸನ ಜಿಲ್ಲೆಯ ’ಕಿತ್ತಾನೆ’ಯಲ್ಲಿ 1943ರ ಡಿಸೆಂಬರ್ 5 ರಂದು ಜನಿಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 'ಬಿ.ಎ.ಪದವಿ' ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಎಂ.ಎ) ಪದವಿ ಪಡೆದರು. ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಕಿ.ರಂ.  ಅವರು ನಂತರ ಮೂರು ...

READ MORE

Related Books