ವಚನಬ್ರಹ್ಮ ದಾಸಿಮಯ್ಯ

Author : ಪ್ರಭುಲಿಂಗ ನೀಲೂರೆ

Pages 72

₹ 50.00




Year of Publication: 2010
Published by: ಬಿಸಿಲುನಾಡು ಪ್ರಕಾಶನ
Address: # 1-871, ವೆಂಕಟೇಶ ನಗರ, ಕಲಬುರಗಿ- 585102
Phone: 9481000094

Synopsys

ಲೇಖಕ ಪ್ರಭುಲಿಂಗ ನೀಲೂರೆ ಅವರ ಕೃತಿ-ವಚನಬ್ರಹ್ಮ ದಾಸಿಮಯ್ಯ. ವಚನಬ್ರಹ್ಮ ದಾಸಿಮಯ್ಯ ವಚನ ಸಾಹಿತ್ಯದಲ್ಲಿ ಜೇಡರ ದಾಸಿಮಯ್ಯನವರಿಗೆ ವಿಶಿಷ್ಟ ಸ್ಥಾನವಿದೆ. ಬಸವಾದಿ ಶರಣರಿಗಿಂತಲೂ ಪೂರ್ವದಲ್ಲಿಯೇ ವಚನಗಳನ್ನು ರಚಿಸಿ ಎಲ್ಲ ಶರಣರಿಗೆ ಪ್ರೇರಣೆಯಾಗಿ ನಿಂತ ದಾಸಿಮಯ್ಯನವರನ್ನು ವಚನಬ್ರಹ್ಮ ಎಂದೇ ಕರೆಯಲಾಗುತ್ತದೆ. ಅವರ ಅಧ್ಯಾತ್ಮ, ಸಾಮಾಜಿಕ ವಿಡಂಬನೆ, ವೇದ ವಿಷಯಗಳ ಚಿಂತನೆ, ಸರಳ ಹಾಗೂ ಸುಂದರ ನುಡಿಗಟ್ಟುಗಳಿಂದ ಕೂಡಿದ ದಾಸಿಮಯ್ಯನವರ ವಚನಗಳು ಸತ್ಯದ ಪರಾಕಷ್ಠೆ ಮೆರೆದಿವೆ. ದಾಸಿಮಯ್ಯನವರ ಚಿಂತನಪರ ವಿಚಾರಗಳು ವೈಚಾರಿಕ ಹಿನ್ನೆಲೆಯಲ್ಲಿ ಸರಳ ಕಥಾರೂಪ ಮತ್ತು ಅವರ 100 ವಚನಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

About the Author

ಪ್ರಭುಲಿಂಗ ನೀಲೂರೆ
(22 July 1974)

ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ  ಕಲಬುರಗಿ ಜಿಲ್ಲೆಯ  ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ)  ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...

READ MORE

Related Books