ವಚನ ವಾಣಿ

Author : ಟಿ.ಪಿ. ಉಮೇಶ

Pages 200

₹ 205.00




Year of Publication: 2018
Published by: ಲೇಖನ ಪ್ರಕಾಶನ
Address: ಚಿತ್ರದುರ್ಗ
Phone: 9482665409

Synopsys

‘ವಚನ ವಾಣಿ’- ಆಧುನಿಕ ಕನ್ನಡ ವಚನಗಳಿರುವ ಈ ಕೃತಿಯು ಟಿ. ಪಿ ಉಮೇಶ್ ಅವರ ವಚನ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ಕವನಗಳು ಹೀಗೆ ಬಿತ್ತರಿಸಿಕೊಂಡಿದೆ:

ಕಲ್ಲು ಚೂರಾಗಿ ಉದುರಿ ಮಣ್ಣಾಗುವುದು; ಕಬ್ಬಿಣವು ತುಕ್ಕು ಹಿಡಿದು ಹುಡಿಯಾಗುವುದು ಮೋಡವು ತಣಿದು ಕರಗಿ ನೀರಾಗಿ ಹರಿಯುವುದು, ಗಿಡಮರಗಳು ಒಣಗಿ ಮಣ್ಣಿಡಿಯುವವು ಸೂರ್ಯ ಚಂದ್ರರು ಗ್ರಹಣದಿ ನರಳುವವರು ಉಮೇಶಪ್ಪಿಯು ಶಿವಮೂರ್ತಿ ಪ್ರಭುವೆ ಮಾನವನೇನು ಶಾಶ್ವತದ ಮತ್ಥಳಿಯೇನು? ಇಲ್ಗುಳಿದು ಉರಿದು ಹೊಳೆದು ಮರೆಯಲು?

ಮರಗಳಿಗೆ ಕೋಟಿ ಕೋಟಿ ಕೊಡುವ ಸರ್ಕಾರ ಆಸ್ತಿ ಉಂಬಳಿ ಬಿಟ್ಟುಕೊಡುವ ಸರ್ಕಾರ ಯಾವ ಕಾನೂನು ಕಾಯ್ದೆಗಳ ನೋಡಲಿಲ್ಗ! ಯಾವ ಅಂಕೆ ಶಂಕೆಗಳನು ತೋರಲಿಲ್ಗ! ನೆರೆ ಬಂದ ಬಡವರಿಗೆ ಸೂರೊಂದ ಕೊಡಲಿಕ್ಕೆ ನೂರೆಂಟು ದಾಖಲೆಗಳ ಕೇಳುವುದೀ ಸರ್ಕಾರ! ಬೆಳೆ ಬರೆದ ರೈತರಿಗೆ ಪರಿಹಾರ ಕೊಡಲಿಕ್ಕೆ ನೂರೆಂಟು ಷರತ್ತುಗಳ ಗೀಚುವುದೇ ಸರ್ಕಾರ! ಉಳ್ಳವರಿಗೇ ಮತ್ತೆ ಊರುಗೋಲಾಗುವ ಸರ್ಕಾರವ ಉಮೇಶಪ್ಪಿಯ ಶಿವಮೂರ್ತಿ ಪ್ರಭುವೆ ಇಲ್ಲದವರಿಗೊಂದಿಷ್ಟು ಊರುಗೋಲಾದರು ಆಗಿಸಯ್ಯಾ !

About the Author

ಟಿ.ಪಿ. ಉಮೇಶ

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ) ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ...

READ MORE

Related Books