ವಚನಾಂಜಲಿ

Author : ಟಿ.ಪಿ. ಉಮೇಶ

Pages 72

₹ 80.00




Year of Publication: 2019
Published by: ಲೇಖನ ಪ್ರಕಾಶನ
Address: ತೊಡರನಾಳು ಟಿ.ನುಲೇನೂರು ಅಂಚೆ, ಹೊಳಲ್ಕೆರೆ .ತಾ, .ಚಿತ್ರದುರ್ಗ .ಜಿ-.577526
Phone: 9008461178

Synopsys

‘ಉಮೇಶ ಪ್ರಿಯ ಶಿವಮೂರ್ತಿ ಪ್ರಭು’ ಎಂಬ ಅಂಕಿತನಾಮದೊಂದಿಗೆ ವಚನಗಳನ್ನು ಬರೆಯುತ್ತಿರುವ ಲೇಖಕ ಟಿ.ಪಿ. ಉಮೇಶ ಅವರ ಕೃತಿ-ವಚನಾಂಜಲಿ. ವಾಸ್ತವಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ವ್ಯಕ್ತಿಗತ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಮೂಲ ದ್ರವ್ಯವಾಗಿಸಿಕೊಂಡ ವಚನಗಳು, ಅಂತಿಮವಾಗಿ ಸದಾಶಯಗಳನ್ನು ಹೊಂದಿವೆ. ಕಂಗೆಟ್ಟ ಮನಸುಗಳಿಗೆ ಸಲಹೆ-ಸೂಚನೆಗಳನ್ನು ನೀಡುತ್ತವೆ. ಘಟನೆ-ಸನ್ನಿವೇಶ ಹಾಗೂ ಸ್ಥಿತಿಗತಿಗಳಿಗೆ ಇರುವ ಕಾರಣ ಹಾಗೂ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. ಮಾತ್ರವಲ್ಲ; ಪರಿಹಾರವನ್ನೂ ಸೂಚಿಸಿ, ಬದುಕಿನ ಸಾರ್ಥಕತೆಗಾಗಿ ಸಾಗಬೇಕಾದ ನಿರ್ದಿಷ್ಟ ಮಾರ್ಗವನ್ನು ನಿರ್ದೇಶಿಸುತ್ತವೆ. ಸಮಸ್ಯೆ-ಗೊಂದಲಗಳಿಗೆ 12ನೇ ಶತಮಾನದ ಶರಣರ ಅಧ್ಯಾತ್ಮಿಕತೆಯಲ್ಲಿ ಪರಿಹಾರವಿದೆ, ಅರಿವಿನಲ್ಲಿ ನೆಮ್ಮದಿ ಇದೆ ಎಂಬ ಭಾವ ಪ್ರಾಧಾನ್ಯತೆಯು ಇಲ್ಲಿಯ ವಚನಗಳ ಕೇಂದ್ರವಾಗಿದೆ.

About the Author

ಟಿ.ಪಿ. ಉಮೇಶ

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ) ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ...

READ MORE

Related Books