ವಚನಕಾರರ ಸಾಮಾಜಿಕ ಕ್ರಾಂತಿ

Author : ವಿ. ಮುನಿವೆಂಕಟಪ್ಪ

Pages 240

₹ 250.00




Year of Publication: 2019
Published by: ಕೀರ್ತಿ ಪ್ರಕಾಶನ
Address: # 190, ಲಗ್ಗೆರೆ, ಎಲ್.ಜಿ. ರಾಮಣ್ಣ ಲೇಔಟ್, ಭೈರವೇಶ್ವರ ನಗರ, ಬೆಂಗಳೂರು-560068

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ವಚನಕಾರರ ಸಾಮಾಜಿಕ ಕ್ರಾಂತಿ. ಶರಣರ ಚಳವಳಿ ಇರುವುದು ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ. ಬಂಡವಾಳಶಾಹಿ, ಅಧಿಕಾರಿಶಾಹಿ ಹೀಗೆ ಯಾವುದೇ ಶಾಹಿಗಿಂತಲೂ ಪುರೋಹಿತಶಾಹಿ ಎಲ್ಲ ರೀತಿಯ ಶೋಷಣೆಗಳನ್ನು ಹುಟ್ಟು ಹಾಕುವುದು ಮಾತ್ರವಲ್ಲ ಆ ವ್ಯವಸ್ಥೆಯ ಮುಂದುವರಿಕೆಗೆ ಸಾಧ್ಯವಿದ್ದ ಎಲ್ಲ ಎಚ್ಚರಿಕೆಗಳನ್ನು ವಹಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿಯೇ, ಅಂದಿನ ವಚನಕಾರರ ಚಳವಳಿಯನ್ನು ಮುರಿಯಲು ಎಲ್ಲ ಸಾಧ್ಯತೆಗಳು ನಡೆದಿದ್ದವು. ಆದರೆ, ಅವು ನಡೆಯಲಾರವು ಎಂದು ತಿಳಿದಾಗ ಮತ್ತೊಂದು ಅಸ್ತ್ರವನ್ನು ಎತ್ತಿಕೊಳ್ಳುವುದು. ಕೊನೆಗೆ ಅಂತರ್ಜಾತಿ ವಿವಾಹದ ಕಾರಣವನ್ನು ಚೆನ್ನಾಗಿ ಬಳಸಿಕೊಂಡು ಸಾಮಾಜಿಕ ಕ್ರಾಂತಿಯ ಕಿಚ್ಚನ್ನೇ ನಂದಿಸಿದರು. ಆದರೆ, ವಚನಗಳ ಹಾಗೂ ವಚನಕಾರರ ವಿಚಾರಗಳನ್ನು ಮಾತ್ರ ಅವರಿಗೆ ತಡೆಯಲಾಗಲಿಲ್ಲ ಎಂಬುದು ಸಾಮಾಜಿಕ ಕ್ರಾಂತಿಯ ನಿರಂತರತೆಯನ್ನು ಸೂಚಿಸುತ್ತದೆ. ಇಂತಹ ವಿಚಾರಗಳನ್ನು ಒಳಗೊಂಡಿರುವ ಕೃತಿ ಇದು.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books