ವೈದೇಹಿ ಮಕ್ಕಳ ನಾಟಕಗಳು

Author : ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

₹ 635.00




Year of Publication: 2022
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741
Phone: 9480280401

Synopsys

ಲೇಖಕಿ ವೈದೇಹಿ ಅವರ ಕೃತಿ ʻವೈದೇಹಿ ಮಕ್ಕಳ ನಾಟಕಗಳುʼ. ವೈದೇಹಿ ಅವರು ರಚಿಸಿದ ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸರ‍್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ ಹಾಗೂ ಮೂಕನ ಮಕ್ಕಳು ಸೇರಿ ಒಟ್ಟು 17 ನಾಟಕಗಳಿವೆ. ಈ ನಾಟಕಗಳು ಮಕ್ಕಳಿಗೆ ಮಾತ್ರವಲ್ಲದೆ ವಿಭಿನ್ನ ವಯೋಮಾನದವರಿಗೂ ಹೊಂದುತ್ತವೆ. ಬಿಡಿ ಕಥೆ-ಕವನಗಳಿಂದ ಪ್ರೇರಿತವಾಗಿ ರಚಿತವಾದ ನಾಟಕಗಳಿಂದ ತೊಡಗಿ ಮಹಾಕವಿ ಶೇಕ್‌ಸ್ಪಿಯರ್‍ ನಾಟಕಗಳಿಂದ ಪ್ರೇರಿತವಾದ ಕೃತಿಗಳೂ ಇವೆ.

About the Author

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
(12 February 1945)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...

READ MORE

Related Books