ವೈದ್ಯ ಮಂಥನ

Author : ರಣಜಿತ ಬೀರಣ್ಣ ನಾಯ್ಕ ಕೆಂಚನ್‌

Pages 230

₹ 195.00




Year of Publication: 2021
Published by: ಸಪ್ನ ಬುಕ್ ಹೌಸ್ ಪ್ರೈ.ಲಿ
Address: ಆರ್.ಒ #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9
Phone: 08040114455

Synopsys

ವೃತ್ತಿಯಲ್ಲಿ ವೈದ್ಯರಾಗಿರುವ ರಣಜಿತ ಬೀರಣ್ಣ ನಾಯ್ಕ ಅವರು ವೈದ್ಯ ಸಂಬಂಧಿತ ಕೃತಿಗಳ ರಚನೆ ಮಾಡುವ ಮೂಲಕ ಜನಸಾಮಾನ್ಯರ ಅನೇಕ ವೈದ್ಯಕೀಯ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಅವರ ಕೃತಿ ವೈದ್ಯ ಮಂಥನ ಇಂತಹದೇ ಒಂದು ಬರಹಗಳ ಸಂಗ್ರಹವಾಗಿದೆ. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ರಣಜಿತ ಬೀರಣ್ಣ ನಾಯ್ಕ ಕೆಂಚನ್‌

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕು ಹಿರೇಗುತ್ತಿಯವರಾದ ಇವರು ವೃತ್ತಿಯಲ್ಲಿ ವೈದ್ಯರು. ಪ್ರಸ್ತುತ ಬೆಳಗಾವಿಯ ಕೆ.ಎಲ್.ಇ.ಎಸ್. ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಕ್ರಿಯೆ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016 ರಿಂದ 2020ರ ವರೆಗೆ ನಿರಂತರವಾಗಿ "ಕರಾವಳಿ ಮುಂಜಾವು" ಪತ್ರಿಕೆಗೆ ಪ್ರತಿವಾರ ವೈದ್ಯಕೀಯ ವಿಚಾರಗಳ ಕುರಿತು ಅಂಕಣಗಳನ್ನು ಬರೆದಿರುವರು. ಅವರ "ವೈದ್ಯ-ವಿಜ್ಞಾನ" ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡಮಿಯ ಶ್ರೇಷ್ಠ ಪುಸ್ತಕ ಪ್ರಶಸ್ತಿ ದೊರೆಕಿದೆ. ರಕ್ತದಾನ, ಹಿಮೋಫಿಲಿಯಾ, ಮಧುಮೇಹ, ಹೃದ್ರೋಗ ಕುರಿತು ಅರಿವು, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತ ವೈದ್ಯಕೀಯ ...

READ MORE

Related Books