ವೈರಾಗ್ಯ ವಿಜಯ ಮತ್ತಿತರ ನಾಟಕಗಳು

Author : ಬಸವರಾಜ ನಾಯ್ಕರ

Pages 330

₹ 300.00




Year of Publication: 2019
Published by: ಗೀತಾಂಜಲಿ ಪ್ರಕಾಶನ
Address: # 60, 2ನೇ ಡಿ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್ ನಾಗರಬಾವಿ, ಬೆಂಗಳೂರು  -560 072
Phone: 9591472345

Synopsys

ವೈರಾಗ್ಯ, ವಿಜಯ ಮತ್ತಿತರೆ ನಾಟಕಗಳು-ಕೃತಿಯನ್ನು ಡಾ. ಬಸವರಾಜ ನಾಯ್ಕರ್ ಬರೆದಿದ್ದು, ಅನುಕ್ರಮವಾಗಿ ಅಕ್ಕಮಹಾದೇವಿ, ಕನಕದಾಸ ಹಾಗೂ ಶಿಶುವಿನಹಾಳ ಶರೀಫ್ ಅವರ ಜೀವನ ಚರಿತ್ರೆ ಕುರಿತಾಗಿದೆ. ದೇಹಧಾರಿ ಮನುಷ್ಯನನ್ನು ತನ್ನ ಪತಿ ಎಂದು ಸ್ವೀಕರಿಸದೇ ಅಕ್ಕ ಮಹಾದೇವಿಯು ಜನನ-ಮರಣಾದಚೆಯ ಚೆನ್ನ ಮಲ್ಲಿಕಾರ್ಜುನನ್ನೇ ತನ್ನ ಪತಿ ಎಂದು ಅಧ್ಯಾತ್ಮಕ ಹಾಘೂ ವೈರಾಗ್ಯದ ಜೀವನ ಸಾಗಿಸುತ್ತಾಳೆ. ಕಾಗಿನೆಲೆಯ ಪರಮ ಸಂತ ಕನಕದಾಸ ಭೌತಿಕ ಸಂಪತ್ತಿನ ಕ್ಷಣಿಕತೆಯನ್ನು ತಿರಸ್ಕರಿಸಿ, ಮುಕ್ತಿಯ ಚೈತನ್ಯದಾಯಕ ಜೀವನದತ್ತ ವಾಲಿ, ಜಾತಿವ್ಯವಸ್ಥೆ ವಿರುದ್ಧ ಹೋರಾಡಿದ ಬದುಕನ್ನು ಚಿತ್ರಿಸುತ್ತದೆ. ಕೊನೆಯದಾಗಿ, ಶಿಶುವಿನಹಾಳ ಶರೀಫ್ ಕೋಮುಸೌಹಾರ್ದತೆಯ ಪ್ರತೀಕವಾಗಿ ತತ್ವಜ್ಞಾನಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಚಿತ್ರಣವಿದೆ. ಅತಿಯಾದ ಭೋಗ, ಮತೀಯ ಸಂಘರ್ಷ ಹಾಗೂ ಆಧುನಿಕ ಜೀವನ ಶೈಲಿಯಿಂದ ಅಶಾಂತಿಯ ಇಂದಿನ ಜೀವನದಲ್ಲಿ ಜೀವನ ಸಾಮರಸ್ಯ, ಸಮನ್ವಯತೆಯನ್ನು ಬೋಧಿಸುವ ಇಲ್ಲಿಯ ನಾಟಕಗಳ ಸಂದೇಶಗಳು ಅರ್ಥಪೂರ್ಣ ಎನಿಸುತ್ತವೆ.

 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books