ವಕ್ರರೇಖೆ

Author : ಜಿ.ಬಿ. ಹರೀಶ

Pages 464

₹ 300.00




Year of Publication: 2009
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ವಿಮರ್ಶಕ, ಲೇಖಕರಾದ ಡಾ. ಜಿ. ಬಿ ಹರೀಶ್ ಅವರ ’ದೇವಚಂದ್ರನ ರಾಜಾವಳಿ ಕಥಾಸಾರ ; ಜೈನ ಸಾಹಿತ್ಯ- ಸಾಂಸ್ಕೃತಿಕ – ಐತಿಹಾಸಿಕ ಅಧ್ಯಯನ’ ಇವರ ಸಂಶೋಧನೆಯ ವಿಷಯ. ರಾಜಾವಳಿ ಕಥಾಸಾರವೆಂದರೆ, ಅದು ಸನಾತನ ಧರ್ಮದ ಉಗಮಸ್ಥಾನ, ಮೊದಲ ಜೈನಸಾಹಿತ್ಯ ಚರಿತ್ರೆಯನ್ನು ತಿಳಿಸುವಂತದ್ದು. ಜೀವಂತ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವ ದೇವಚಂದ್ರನ ನಿಲುವು, ಪ್ರಭುತ್ವಗಳನ್ನು ಪ್ರಸ್ತಾಪಿಸುವಂತದ್ದು.

ದೇವಚಂದ್ರ ಕವಿ ಎಂಥವನು? ದೇವಚಂದ್ರನ ಬರಹಗಳ ಕಾಲ-ದೇಶ, ದೇವಚಂದ್ರನ ಸ್ಫೂರ್ತಿ ಮತ್ತು ರಾಜಾವಳಿ ಕಥಾಸಾರದ ಸ್ವರೂಪ, ರಾಜಾವಳಿಯ ಬೌದ್ಧಿಕ ವಾತಾವರಣ, ರಾಜಾವಳಿಯ ಕಥಾಸಾರದಲ್ಲಿ ಜೈನ ಇತಿಹಾಸ, ರಾಜಾವಳಿಯ ಕಥಾಸಾರದಲ್ಲಿ ಸಂಸ್ಕೃತಿ, ಸಮಾಜ, ಸಮುದಾಯಗಳು, ರಾಜಾವಳಿ ಕಥಾಸಾರದ ಹಿನ್ನೆಲೆ ಮತ್ತು ಮುನ್ನೋಟ ಇಂತಹ ಮಾಹಿತಿಗಳ ದೀರ್ಘ ಇತಿಹಾಸ, ವಸ್ತು ವಿವರಣೆಗಳನ್ನು ’ ವಕ್ರರೇಖೆ’ ಕೃತಿ ಒಳಗೊಂಡಿದೆ.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books