ವಾಕ್ಯಪದೀಯ

Author : ಎನ್. ರಂಗನಾಥಶರ್ಮಾ

Pages 147

₹ 35.00




Year of Publication: 1993
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ-ಹೆಗ್ಗೋಡು, ಸಾಗರ, ಕರ್ನಾಟಕ-577417

Synopsys

ವಾಕ್ಯಪದೀಯ- ಪ್ರಾಚೀನ ಭಾರತದ ಮಹಾನ್ ಭಾಷಾತತ್ವಜ್ಞಾನಿಯಾದ ಭರ್ತೃಹರಿಯ ವಾಕ್ಯಾಪದೀಯಮ್ ಗ್ರಂಥದ ಕನ್ನಡ ಅನುವಾದಿತ ಕೃತಿ.  ಸಂಸ್ಕೃತ ಮೂಲ ಮತ್ತು ಕನ್ನಡಾನುವಾದ, ವಿವರಣೆಗಳು ಮೂರೂ ಇವೆ. ಈ ಕೃತಿಯನ್ನು ವಿದ್ವಾನ್ ಎನ್.ರಂಗನಾಥಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಹಳೆ ತಲೆಮಾರಿನ ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ ಎನ್. ರಂಗನಾಥ ಶರ್ಮರು ಸಂಸ್ಕೃತದ ಅನೇಕ ಮೇರು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರು ತಮ್ಮ ಸಂಪಾದಕೀಯ ಲೇಖನದಲ್ಲಿ ಭರ್ತೃಹರಿ, ಬೌದ್ಧಮೀಮಾಂಸೆ ಮತ್ತು ಸಮಕಾಲೀನ ಪಾಶ್ಚ್ಯಾತ್ಯ ಚಿಂತನೆ ಬೆರೆಯುವ, ಬೇರೆಯಾಗುವ ನೆಲೆಗಳನ್ನು ಚರ್ಚಿಸಿದ್ದಾರೆ. ಇದನ್ನು ಕನ್ನಡದ ವಿದ್ವತ್ ಲೋಕವನ್ನು ವಿಸ್ತರಿಸುವ ಕೃತಿ ಎಂದೇ ಕರೆಯಲಾಗುತ್ತದೆ. 

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books