ವನಸಿರಿ

Author : ಅಜ್ಜಂಪುರ ಕೃಷ್ಣಸ್ವಾಮಿ

Pages 420

₹ 300.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900

Synopsys

ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ-ವನಸಿರಿ. ಭಾರತ ದೇಶದಲ್ಲಿ ಕರ್ನಾಟಕ ಭೂ ಪ್ರದೇಶವು ಅರಣ್ಯದಿಂದ ಸಮೃದ್ಧವಾಗಿದೆ. ಪಶ್ಚಿಮ ಘಟ್ಟಗಳು ಅರಣ್ಯ ಪ್ರದೇಶಕ್ಕೆ ಕಿರೀಟವಿಟ್ಟಿವೆ. ಮಾತ್ರಬವಲ್ಲ; ಇಲ್ಲಿ ಗಂಧದದ ಮರಗಳು ವಿಶೇಷವಾಗಿವೆ. ಈ ಅರಣ್ಯ ಪ್ರದೇಶವು ದೇಶದ ಇತರೆ ಅರಣ್ಯ ಪ್ರದೇಶಗಳಿಂದ ವಿಭಿನ್ನವಾಗಿಸುತ್ತದೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳ ಬೃಹದಾಕಾರದ ವೃಕ್ಷಗಳು, ಪರ್ಣಪಾತಿ ಕಾಡುಗಳ ಉತ್ತಮ ಚೌಬೀನೆ ಮರಜಾತಿಗಳು, ಅಮೂಲ್ಯ ಫಸಲುಗಳ ಗಿಡಮರಗಳು, ಬಿದಿರು, ಕಾನಿನ ಬೆತ್ತ, ಗಿಡಮೂಲಿಕೆಗಳು ಕರ್ನಾಟಕ ಅರಣ್ಯ ಪ್ರಧೇಶದ ವೈಶಿಷ್ಟ್ಯಗಳಾಗಿವೆ. ಕರ್ನಾಟಕದ ವೃಕ್ಷಜಾತಿಗಳ ನೆಲೆ, ಆಕಾರ, ಋತುಘಟನೆ, ಉಪಯುಕ್ತತೆ, ಸ್ವಾಭಾವಿಕ ಪುನರುತ್ಪನ್ನದ ಸ್ಥಿತಿಗತಿ, ಕೃತಕ ಪುನರುತ್ಪನ್ನದ ಸಾಧ್ಯತೆ ಇವುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ವೃಕ್ಷಸಂಪತ್ತು ‘ವನಸಿರಿ’ಯ ಮುಖ್ಯ ಅಂಶವಾಗಿದ್ದರೆ, ‘ಮೃಗಸಂಪತ್ತು’ ವೃಕ್ಷಗಳೇ ಕಲ್ಪಿಸಿಕೊಟ್ಟ ಪರಿಸರದಲ್ಲಿ ಕಾಣಬರುವ ವನಸಿರಿಯ ಪೂರಕ ಅಂಶ. ಕರ್ನಾಟಕದ ಪರಿಚಿತ ವನ್ಯಮೃಗಗಳೊಂದಿಗೆ ಇನ್ನಿತರ ಅಪರಿಚಿತ ಮೃಗಗಳ ವಿವರಣೆ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ಹುಲಿಯ ಬೇಟೆ, ಆನೆಯ ‘ಖೆಡ್ಡ’ ಇವುಗಳ ವಿವರಣೆಯನ್ನು ಚಾರಿತ್ರಿಕ ಕುತೂಹಲತೆಗಾಗಿ ಕೊಡಲಾಗಿದೆ. ಕರ್ನಾಟಕ ಅರಣ್ಯ ಪ್ರದೇಶವು ತನ್ನ ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತದೆ.

About the Author

ಅಜ್ಜಂಪುರ ಕೃಷ್ಣಸ್ವಾಮಿ

ಚಿಕ್ಕಮಗಳೂರು ಜಿಲ್ಲೆಯ ತೆರೀಕೆರೆಯಲ್ಲಿ ಜನಿಸಿದ ಅಜ್ಜಂಪುರ ಕೃಷ್ಣಸ್ವಾಮಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪದವೀಧರರು. ಡೆಹರಾಡೂನ್ ನಲ್ಲಿ ಅರಣ್ಯ ತರಬೇತಿ ಪಡೆದರು. ಅಂದಿನ ಮೈಸೂರು ರಾಜ್ಯದ ರೇಷ್ಮೆ ಇಲಾಖೆಯಲ್ಲಿ ಕೆಲಸ, ನಂತರ, ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. ಭಾರತೀಯ ಅರಣ್ಯ ಸೇವಾ ಸದಸ್ಯರು, ಕರ್ನಾಟಕ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಆಗಿದ್ದರು. ಕರ್ನಾಟಕದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನಿವೃತ್ತರಾದರು.  ಕೃತಿಗಳು: ಅರಣ್ಯಶಾಸ್ತ್ರ, ವನಸಿರಿ, ಖಗಸಿರಿ, ವನವೈಖರಿ, ಅರಣ್ಯ , ವನದರ್ಶನಂ ಇತ್ಯಾದಿ ಆಗಮಿಕರ ನಾಡು (ಅಮೆರಿಕ ಪ್ರವಾಸ ಕಥನ)., ಜಪಾನ್ (ಪ್ರವಾಸ ಕಥನ),  ಹರಿವು (ವನಪಾಲಕನೊಬ್ಬನ ಆತ್ಮಕಥೆಯಂತಿರುವ ಕೃತಿಯು ವನಪಾಲಕರಿಗೆ, ಮಕ್ಕಳಿಗೆ ...

READ MORE

Related Books