ವಸಂತಷೋಡಶಿ

Author : ಕಬ್ಬಿನಾಲೆ ವಸಂತ ಭಾರದ್ವಾಜ್

Pages 316

₹ 300.00




Year of Publication: 2021
Published by: ಯಜ್ಞಲಕ್ಷ್ಮೀ ಪ್ರಕಾಶನ
Address: ಮೈಸೂರು

Synopsys

ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಕೃತಿ ವಸಂತಷೋಡಶಿ. ಈ ಕೃತಿಯಲ್ಲಿ ಭಾನುಮತಿಯ ನೆತ್ತ, ರಾಮಾನುಜವಿಜಯ, ವಾದಿರಾಜಚರಿತೆ, ಅಲ್ಲಮದರ್ಶನ, ಅಹಿಂಸಾಶ್ವಮೇಧ, ಮುಂತಾದ ಹದಿನಾರು ಯಕ್ಷಗಾನ ಕಾವ್ಯಗಳಿವೆ. ಕಾವ್ಯರತ್ನ ದೇ.ಜವರೇಗೌಡ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಟರು ರಚಿಸಿದ ಯಕ್ಷಗಾನ ಉವ್ಯಗಳನ್ನು ಓದಿ ನಾನು ಆನಂದತುಂದಿಲನಾಗಿದ್ದೇನೆ. ವೈವಿಧ್ಯಪೂರ್ಣ ಛಂದೋಬಂಧಗಳನ್ನು ಬಳಸಿ ಅವರು ಕನ್ನಡಕಾವ್ಯಕನ್ನೆಗೆ ಬಂಗಾರದ ಗೆಜ್ಜೆಯನ್ನೇ ತೊಡಿಸಿದ್ದಾರೆ. ಪದಪ್ರಯೋಗ ಪರಿಣತಿ, ವರ್ಣನಾಕೌಶಲ, ಪ್ರಾಸಾಲಂಕಾರಗಳ ಚೆಲುವಿನಿಂದ ನರ್ತಿಸುವ ಅವರ ಕಾವ್ಯಮಯೂರಿಯನ್ನು ಕಂಡಾಗ ಯಾರಿಗಾದರೂ ಮನಸೂರೆಯಾಗುವುದು ಸಹಜ, ಸ್ವಾಭಾವಿಕ, ಮುದ್ದಣ, ರತ್ನಾಕರವರ್ಣಿಯರ ಕವಿಚೈತನ್ಯ ಕಬ್ಬಿನಾಲೆಯವರ ಕಬ್ಬಗಳಲ್ಲಿ ಮರುಮೆಯ್ಯಾಂತುಕೊಂಡಿದೆ ಎಂದರೆ ಆತಿಶಯೋಕ್ತಿಯಲ್ಲ. ಶಾಸ್ತ-ಕಾವ್ಯಕಲಾಸೃಜನೆಯ ಪಾಂಡಿತ್ಯ ಪ್ರತಿಭೆಗಳ ಈ ಸವ್ಯಸಚಿಗೆ ಕನ್ನಡ ಜನಮನದ ಹಾರ್ದಿಕ ಅಭಿನಂದನೆಗಳು ಎಂದಿದ್ದಾರೆ.

About the Author

ಕಬ್ಬಿನಾಲೆ ವಸಂತ ಭಾರದ್ವಾಜ್
(04 December 1961)

ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು.  ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು.  ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ...

READ MORE

Related Books