ವಾತ್ಯಲ್ಯ

Author : ಶ್ರೀರಾಮ ಇಟ್ಟಣ್ಣವರ

Pages 140

₹ 50.00




Year of Publication: 1996
Published by: ಬಾಬೂರವ ಅ. ಕುಲಕರ್ಣಿ
Address: ಬಾಬೂರವ ಅ. ಕುಲಕರ್ಣಿ ಬೆಳಗಾವಿ ಜಿಲ್ಲೆ

Synopsys

ಶ್ರೀರಾಮ ಇಟ್ಟಣ್ಣವರ ಅವರ ಕುಟುಂಬದ ಹಿರಿಯರ ವರ್ಧಂತಿ ಸಂದರ್ಭದಲ್ಲಿ ಹೊರಬಂದ ಅಭಿನಂದನಾ ಗ್ರಂಥ-ವಾತ್ಸಲ್ಯ. ಲೇಖಕ ವಸಂತ ಕುಲಕರ್ಣಿ ಅವರು ಕೃತಿಗೆ ಮುನ್ನುಡಿ ಬರೆದು ‘ಇದು ಲೇಖನ ಕವಿತೆಗಳ ಮೂಲಕ ಸಾಹಿತ್ಯಿಕ ಸ್ಪಂದನಗಳನ್ನು ಪಡೆದುಕೊಂಡಿದೆ. ಕೌಟುಂಬಿಕ ಮೌಲ್ಯಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಈ ಅಭಿನಂದನಾ ಗ್ರಂಥಕ್ಕೆ ಸಾಮಾಜಿಕ ಮಹತ್ವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರಂಥ ಸಂಪಾದಕ ಡಾ. ಶ್ರೀ ರಾಮ ಇಟ್ಟಣ್ಣವರ ಅವರು, ಗ್ರಂಥವನ್ನು ಕೇವಲ ಕೌಟುಂಬಿಕ ನೆಲೆಯಲ್ಲೇ ನಿಲ್ಲಿಸದೆ, ಸಾರ್ವತ್ರಿಕ ರೂಪ ಕೊಟ್ಟಿರುವುದು ಈ ಪುಸ್ತಕದ ವಿಶೇಷತೆ ಆಗಿದೆ. ಕುಲಕರ್ಣಿ ಕುಟುಂಬದ ಸದಸ್ಯರೆಲ್ಲ ಪರಸ್ಪರ ವಾತ್ಯಲ್ಯದ ತೋಳ್ತೆಕ್ಕೆಯಲ್ಲಿ ಒಂದು ಗೂಡಿಯೇ ಇರುವುದು ಹೆಮ್ಮೆ ತಂದ ವಿಷಯವಾಗುತ್ತದೆ ಎಂಬುದನ್ನು ಈ ಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ.

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books