ವಾಯು ವಿಹಾರದಲ್ಲಿ ಚರ್ಚೆ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 104

₹ 75.00




Year of Publication: 2009
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಸುಭಾಶಚಂದ್ರ ಕಶೆಟ್ಟಿ, ಬಾಚನಾಳ ಅವರು ಬರೆದ ಪ್ರಬಂಧಗಳ ಸಂಕಲನ-ವಾಯುವಿಹಾರದಲ್ಲಿ ಚರ್ಚೆ. ಒಟ್ಟು 11 ವೈಚಾರಿಕ ಪ್ರಬಂಧಗಳಿವೆ. ಸಮಾಜದಲ್ಲಿ ಆಗುತ್ತಿರುವ ಅತ್ಯಾಚಾರ,ಅನ್ಯಾಯ,ಮಾನವರ ಜೀವನದಲ್ಲಿ ನಡೆಯುವ ಅನಾಹುತ ಹೀಗೆ ಹತ್ತು ಹಲವಾರು ವಿಚಾರಗಳು ಪ್ರಸ್ತಾಪವಾಗಿವೆ. ವಿನಾಯಕ- ಆನಂದರ 'ವಾಯು ವಿಹಾರದಲ್ಲಿ ಚರ್ಚೆ'ಯ ಮುಖಾಂತರ ಓದುಗರ ಮುಂದೆ ಸಾದರ ಪಡಿಸಲಾಗಿದೆ. ಗೆಳೆಯರು ಕೂಡಿಕೊಂಡು ಮುಂಜಾನೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದು ಸಾಮಾನ್ಯ. ವಾಯುವಿಹಾರದ ವೇಳೆ ಬುಡ ಕೊನೆವಿಲ್ಲದ ಹಲವಾರು ವಿಷಯಗಳು ಚರ್ಚೆ ಆಗುತ್ತವೆ. ಅದರಂತೆ ವಿನಾಯಕ ಹಾಗೂ ಆನಂದರು ತಮ್ಮ ಜೀವನದಲ್ಲಿ ಹಾಗೂ ಸಮಾಜದಲ್ಲಿ ಎದ್ದುಕಾಣುವ ಹಲವಾರು ವಿಷಯಗಳನ್ನು ಚರ್ಚೆ ಮಾಡುತ್ತಿರುವುದು ಇಲ್ಲಿಯ ಪ್ರಬಂಧಗಳ ವಸ್ತು. ಇವು ಬದುಕಿನ ಚಿತ್ರಣವಾಗಿವೆ. ಒಳ್ಳೆಯ ಬದುಕಿನೆಡೆಗೆ ಬೆಳಕು ತೋರಿಸುವುದೇ ಈ ಪ್ರಬಂಧಗಳ ಮುಖ್ಯ ಉದ್ದೇಶ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ಮದ್ಯಪಾನದ ಅಪಾಯಗಳು, ವರದಕ್ಷಿಣೆ ತೆಗೆದುಕೊಳ್ಳಬೇಕೋ ಬೇಡವೋ, ಲಂಚ ನಿರ್ಮೂಲನೆ ಎಂಬ ಬಗ್ಗೆಯೂ ಪ್ರಸ್ತಾಪವಿದೆ. ಶರಣರ ವಚನಗಳು ಕೇವಲ ಪಠಿಸಿದರೆ ಸಾಲದು ಆಚರಣೆಗೆ ತಂದರೆ ಉತ್ತಮ ಎಂಬ ಸಂದೇಶವೂ ಇದೆ. ಒಂದು ದಿನ ಆತ್ಮಹತ್ಯೆ ಬಗ್ಗೆ ಇನ್ನೊಂದು ದಿನ ಚಲನಚಿತ್ರಗಳ ಬಗ್ಗೆ, ಮಗದೊಂದು ದಿನ ಸರಕಾರಿ ಕಾರ್ಯವೈಖರಿ,ಅಲ್ಲಿ ಕೆಲಸ ಮಾಡುವ ಅಧಿಕಾರಿಗಳ ಹಾಗೂ ಗುಮಾಸ್ತರ ಬಗ್ಗೆ ಚರ್ಚೆ ಹೀಗೆ ಪ್ರಬಂಧಗಳಿಗೆ ವಸ್ತುವನ್ನು ಒದಗಿಸಿಕೊಳ್ಳಲಾಗಿದೆ. ಹೀಗೆ, ವಿಷಯ ಪ್ರತಿಪಾದನೆಗೆ ವಾಯುವಿಹಾರದ ವೇಳೆಯನ್ನು ಲೇಖಕರು ಬಳಸಿಕೊಂಡಿದ್ದು ಇಲ್ಲಿಯ ತಂತ್ರ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books