ವೀರ ಸಂನ್ಯಾಸಿ ವಿವೇಕಾನಂದ

Author : ಸ್ವಾಮಿ ಪುರುಷೋತ್ತಮಾನಂದ

Pages 304

₹ 120.00




Year of Publication: 2015
Published by: ಶ್ರೀ ರಾಮಕೃಷ್ಣಾಶ್ರಮ
Address: ಯಾದವಗಿರಿ, ಮೈಸೂರು

Synopsys

ಸ್ವಾಮಿ ಪುರುಷೋತ್ತಮಾನಂದ ಅವರು ರಚಿಸಿದ ಕೃತಿ-ವೀರ ಸಂನ್ಯಾಸಿ ವಿವೇಕಾನಂದ-ಸಂಪುಟ-1. ಯುವಕರು ಬ್ರಹ್ಮಚರ್ಯ ಆಚರಿಸುವ ಅಗತ್ಯವನ್ನುಪ್ರತಿಪಾದಿಸಿರುವ ಕೃತಿಯು, ಬ್ರಹ್ಮಚರ್ಯದ ಪಾಲನೆಯನ್ನು ವೃಥಾ ಸಂಶಯಕ್ಕೆ ಈಡು ಮಾಡುಮಾಡುವುದು ಸರಿಯಲ್ಲ. ಯುವಜನತೆಯ ಮನೋದೈಹಿಕ ಆರೋಗ್ಯದಲ್ಲಿ ಬ್ರಹ್ಮಚರ್ಯವು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿವೇಕಾನಂದರ ಕುರಿತು ಅವರು ಬರೆದ ಮೂರು ಬೃಹತ್ ಕೃತಿಗಳ ಪೈಕಿ ಈ ಗ್ರಂಥವು ಮೊದಲನೆಯದಾಗಿದೆ. ವಿವೇಕಾನಂದರು ಸಂನ್ಯಾಸಿ ಮಾತ್ರವಲ್ಲ; ಅವರು ಪಂಚೇಂದ್ರಿಯಗಳನ್ನು ಗೆದ್ದವರು ಹಾಗೂ ವೀರ ಸಂನ್ಯಾಸಿ ಆದದ್ದು ಹೇಗೆ ಎಂಬ ಬಗ್ಗೆಯೂ ಈ ಕೃತಿಯಲ್ಲಿ ವಿವರಗಳನ್ನು ಸಮರ್ಥವಾಗಿ ನೀಡಲಾಗಿದೆ.

About the Author

ಸ್ವಾಮಿ ಪುರುಷೋತ್ತಮಾನಂದ
(14 June 1931 - 25 February 2005)

ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು.  “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.  ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ...

READ MORE

Related Books