ವಿದುರ ನೀತಿ

Author : ಎನ್. ರಂಗನಾಥಶರ್ಮಾ

Pages 66

₹ 30.00




Year of Publication: 2007
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು560018

Synopsys

ಕುಮಾರವ್ಯಾಸನ ಕರ್ಣಾಟ ಭಾರತಿ ಕಥಾಮಂಜರಿ ಕೃತಿಯಲ್ಲಿ ಪಸ್ತಾಪಿಸಲಾದ ವಿದುರ ನೀತಿಯ ಭಾಗವನ್ನು ಲೇಖಕ ಎನ್. ರಂಗನಾಥ ಶರ್ಮ ಅವರು ದಾಖಲಿಸಿದ್ದೇ ಈ ಕೃತಿ. ಶತಮಾನೋತ್ಸವ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟಿಸಿದೆ.

ಮಹಾಭಾರತದಲ್ಲಿ ಕೌರವರೂ ತನ್ನನ್ನು ಮೆಚ್ಚಿಕೊಳ್ಳದಿದ್ದರೂ ತಾನು ನಂಬಿದ ನೀತಿಯನ್ನು ಸಲಹೆ ರೂಪದಲ್ಲಿ ನೀಡುತ್ತಾ ಹೋಗುವ ವಿದುರನ ಪಾತ್ರದ ವಿಶೇಷತೆಯನ್ನು ಕುಮಾರವ್ಯಾಸನು ಗಮನಿಸಿದ್ದು, ಆ ವ್ಯಕ್ತಿತ್ವವನ್ನು ಸಾಹಿತ್ಯಕವಾಗಿ ರೂಪಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ. ವಿದುರನ ನೀತಿಯ ಪಾಲನೆಯ ಅನಿವಾರ್ಯತೆಯನ್ನು, ಅದುವೇ ಜೀವನ ಸಾರ್ಥಕತೆಯ ಮಾನದಂಡ ಎಂಬಂತಿರುವ ಅಂಶಗಳು ಈ ಕೃತಿಯ ವಿಶೇಷತೆಗಳಾಗಿವೆ.

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books