ವಿಜಯನಗರ ಚರಿತ್ರೆ, ಬರವಣಿಗೆ, ಮರು ಓದು

Author : ಕೆ. ಮೋಹನಕೃಷ್ಣ ರೈ

Pages 319

₹ 240.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಸಾಮ್ರಾಜ್ಯದ ಇತಿಹಾಸವೂ ವಿಜಯನಗರದ ಚರಿತ್ರೆಯಾಗಿದೆ. ಆದ್ದರಿಂದ, ವೈಭವೀಕರಣ, ಕೋಮುವಾದಿ ಭಾವನೆ, ಅರಸು ಆರಾಧನೆಗಳು ಹೇರಳವಾಗಿ ಕಾಣ ಸಿಗುತ್ತವೆ. ಈ ಸಾಮ್ರಾಜ್ಯದ ಹುಟ್ಟು ಹಾಗೂ ಅವನತಿಯು ಅಧ್ಯಯನ ದೃಷ್ಟಿಯಿಂದ ಅಧ್ಯಯನ ಮಹತ್ವದ್ದು. ರಾಷ್ಟ್ರೀಯವಾದಿ -ಸಾಮ್ರಾಜ್ಯಶಾಹಿ ಹೀಗೆ ಎರಡೂ ಆಯಾಮಗಳಿಂದ ಈ ಚರಿತ್ರೆಯನ್ನು ವಿಶ್ಲೇಷಿಸಬಹುದು. ಇಲ್ಲಿಯ ಲೇಖನಗಳು ಈ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತವೆ. ಶಾಸನ-ಕಟ್ಟಡಗಳು-ನಾಣ್ಯಗಳು ಹೀಗೆ ವಿವಿಧ ಆಕರಗಳಿಂದಲೂ ವಿಜಯನಗರ ಸಾಮ್ರಾಜ್ಯದ ಚರಿತ್ರೆಯನ್ನು ಬರೆಯುವ ಹತ್ತು ಹಲವು ಅಗತ್ಯತೆಗಳನ್ನು ಈ ಕೃತಿ ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ, ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿ, ಜನಜೀವನ, ಆಚಾರ-ವಿಚಾರಗಳು ಪ್ರತಿಯೊಂದರ ಅಧ್ಯಯನ ಹಾಗೂ ದಾಖಲೀಕರಣದ ಪ್ರಕ್ರಿಯೆಯಲ್ಲಿ ಮರು ಓದು ಅನಿವಾರ್ಯ. ಈ ಉದ್ದೇಶದ ಸಾಧನೆಯ ಹಾದಿಯಲ್ಲಿ ಈ ಕೃತಿಯು ಮಹತ್ವದ ಹೊಳವುಗಳನ್ನು ನೀಡುತ್ತದೆ.

About the Author

ಕೆ. ಮೋಹನಕೃಷ್ಣ ರೈ
(27 April 1969)

ಡಾ.ಕೆ. ಮೋಹನ್ ಕೃಷ್ಣ ರೈ, 1969 ರ ಏ.27 ರಂದು ಜನಿಸಿದರು. ಎಂ.ಎ ಪಿ.ಎಚ್  ಡಿ ಪದವೀಧರರು. ಚರಿತ್ರೆ ವಿಭಾಗದ ಪ್ರಾಧ್ಯಾಪಕರು. ಮಧ್ಯಕಾಲೀನ ಹಾಗು ಆಧುನಿಕ ಭಾರತದ ಚರಿತ್ರೆ, ಆಧುನಿಕ ಯುರೋಪಿನ ಚರಿತ್ರೆ, ಭಾರತದ ನಗರ ಚರಿತ್ರೆ ವಿಷಯಗಳಲ್ಲಿ ಪರಿಣತಿ. ನಗರ ಚರಿತ್ರೆ, ಸಂಸ್ಕ್ರತಿ ಚರಿತ್ರೆ, ಪರಿಸರ ಚರಿತ್ರೆ ಅಧ್ಯಯನದ ಆಸಕ್ತಿಯ ಕ್ಷೇತ್ರಗಳು.  ’ಪರಿಸರ ಚಳವಳಿಗಳು , ಪ್ರಭುತ್ವ ಮತ್ತು ಜನತೆ, ಕೆನರಾ ವಿಭಜನೆ , ವಸಾಹತುಶಾಹಿ ಮತ್ತು ನಗರೀಕರಣ ’ ಪ್ರಕಟಿತ  ಕೃತಿಗಳು. ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್‌, ಚಿರಿತ್ರೆ ವರ್ತಮಾನ ಕಥನ, ರಾಣಿ ಅಬ್ಬಕ್ಕಳ ...

READ MORE

Related Books