ವಿಜ್ಞಾನ : ಸವಾಲು-ಜವಾಬು

Author : ಟಿ. ಆರ್. ಅನಂತರಾಮು

Pages 124

₹ 60.00




Year of Publication: 2010
Published by: ವಸಂತ ಪ್ರಕಾಶನ
Address: ನಂ. 360, 10ನೇ `ಬಿ ಮುಖ್ಯರಸ್ತೆ, ಜಯನಗರ 3ನೇ ಬ್ಲಾಕ್, ಬೆಂಗಳೂರು-560 011
Phone: 0802244 3996

Synopsys

ವಿಜ್ಞಾನ ತಂತ್ರಜ್ಞಾನ ದಾಪುಗಾಲು ಹಾಕುತ್ತ ಸಾಗಿರುವ ಕಾಲಘಟ್ಟದಲ್ಲಿ ನಮ್ಮ ಬದುಕಿನ ಎಲ್ಲ ಮಗ್ಗುಲನ್ನೂ ವಿಜ್ಞಾನ ಆವರಿಸಿಬಿಟ್ಟಿದೆ. ಅದರಲ್ಲೂ ಮಕ್ಕಳಿಗಂತೂ ಎಲ್ಲವೂ ಕುತೂಹಲವೇ. ನಮ್ಮ ರಕ್ತವೇಕೆ ಕೆಂಪು? ಕುದುರೆ ಏಕೆ ನಿಂತುಕೊಂಡೇ ನಿದ್ದೆ ಮಾಡುತ್ತದೆ? ಸ್ಟೀಲ್‍ಪಾತ್ರೆಗೆ ಏಕೆ ತುಕ್ಕು ಹಿಡಿಯುವುದಿಲ್ಲ? ನಮಗೆ ನಾವೇ ಚಕ್ಕುಂಗುಲಿ ಇಟ್ಟುಕೊಂಡರೆ ಏಕೆ ನಗಲಾಗುವುದಿಲ್ಲ? ಮಕ್ಕಳು ಇಂಥ ಪ್ರಶ್ನೆ ಕೇಳಿದಾಗ ಅವರು ವೈಜ್ಞಾನಿಕ ಉತ್ತರಗಳನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಉಪಾಧ್ಯಾಯರ ಜೊತೆಗೆ ಪೋಷಕರ ಪಾತ್ರವೂ ದೊಡ್ಡದಿದೆ. ಸಾಮಾನ್ಯ ವಿಜ್ಞಾನ ವಿಭಾಗಕ್ಕೆ ಸೇರುವ `ವಿಜ್ಞಾನ : ಸವಾಲು-ಜವಾಬು’ ಕೃತಿಯಲ್ಲಿ ಮಕ್ಕಳ ಮನಸ್ಸಿನಲ್ಲಿ ಏಳಬಹುದಾದ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ, ಆದರೆ ವೈಜ್ಞಾನಿಕವಾಗಿ ಉತ್ತರಗಳನ್ನು ಕೊಡಲಾಗಿದೆ. ಇದನ್ನು ಓದಿದರೆ ದೊಡ್ಡವರ ಜ್ಞಾನವೂ ಹಿಗ್ಗುತ್ತದೆ, ಮಕ್ಕಳ ಮನಸ್ಸೂ ಮುದಗೊಳ್ಳುತ್ತದೆ. ಇಲ್ಲಿಯ ಅನೇಕ ಪ್ರಶ್ನೆಗಳಿಗೆ ಸೂಕ್ತವಾದ ಚಿತ್ರಗಳನ್ನೂ ನೀಡಿರುವುದು ಗ್ರಹಿಕೆಗೆ ಸುಲಭವಾಗಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books