ವಿಜಯನಗರಚರಿತ್ರೆ* (ಭಾಗ-1 ಮತ್ತು ಭಾಗ-2)

Author : ಗುರುಮೂರ್ತಿ ಪೆಂಡಕೂರು

Pages 316

₹ 100.00




Year of Publication: 2010

Synopsys

ಶತಮಾನಗಳು ಕಳೆದರೂ ಭಾರತದ ಚರಿತ್ರೆಯಲ್ಲಿ ಹೊಳೆಯುತ್ತಲೇ ಇರುವ ಸಾಮ್ರಾಜ್ಯವಾದ ವಿಜಯನಗರವನ್ನು ಕುರಿತು ಡಾ. ನೇಲಟೂರಿ ವೆಂಕಟರಮಣಯ್ಯನವರು ತೆಲುಗಿನಲ್ಲಿ ಕೃತಿಯನ್ನು ರಚಿಸಿದ್ದಾರೆ. ಇದನ್ನು ಗುರುಮೂರ್ತಿ ಪೆಂಡಕೂರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಐತಿಹಾಸಿಕ ವಿಚಾರಗಳನ್ನು ಪ್ರಾಮಾಣಿಕವಾಗಿ ಹಾಗು ಆಧಿಕಾರಿಕವಾಗಿ ನಿರೂಪಿಸಿರುವ ಕೃತಿಯೆಂಬುದು ಇದರ ಹೆಗ್ಗಳಿಕೆಯಾಗಿದೆ. ಸಂಗಮ ವಂಶದ ಆದಿಯಿಂದ ಹಿಡಿದು ಸಾಳುವ, ತುಳುವ ವಂಶದ ರಾಜರ ಆಳ್ವಿಕೆಯನ್ನು ಒಳಗೊಂಡು ಸದಾಶಿವರಾಯರವರೆಗಿನ ಭವ್ಯ ಇತಿಹಾಸವನ್ನು ವರ್ತಮಾನಕ್ಕೆ ತಂದು ಈ ಕೃತಿಯೂ ನಮ್ಮ ಮುಂದಿಡುತ್ತದೆ.

About the Author

ಗುರುಮೂರ್ತಿ ಪೆಂಡಕೂರು
(09 June 1938)

ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ.  ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ...

READ MORE

Related Books