ವಿಕ್ಷಿಪ್ತ ಕವಿಯ ಇನ್ನೂರು ವಿರಹ ವರ್ಷಗಳು

Author : ರಾಜೇಂದ್ರ ಪ್ರಸಾದ್

₹ 150.00




Published by: ಸಂಕಥನ
Address: #72, ಭೂಮಿಗೀತ 6 ನೇ ತಿರುವು, ವಿದ್ಯಾಗಿರಿ, ಮಂಡ್ಯ-571401

Synopsys

ಕವಿ ಹಾಗೂ ಅನುವಾದ ರಾಜೇಂದ್ರ ಪ್ರಸಾದ್ ಅವರು ಫ್ರೆಂಚ್ ಕವಿ ಚಾರ್ಲ್ಸ್ ಬೋದಿಲೇರ್ ಅವರ ಕವಿತೆಗಳನ್ನು ಸಂಪಾದಿಸಿದ ಕೃತಿ. ಬೋದಿಲೇರ್ ನನ್ನು ಒಬ್ಬ ಕವಿಯಾಗಿ ನೋಡಿರುವ ನಮಗೆಲ್ಲ. ಅವನೊಳಗಿನ ಅಪ್ರತಿಮ ಸೌಂದರ್ಯ, ಸಂಗೀತ, ಸಂಪನ್ನತೆ,ಕಲಾವಿಮರ್ಶಕತೆ ಕಂಡೇ ಇಲ್ಲ. ಒಂದರ್ಥದಲ್ಲಿ ಅವನೇ ಈ ಜಗತ್ತಿನ ಮೊದಲ ನವ್ಯ ಕವಿ. 19ನೇ ಶತಮಾನದ ಆದಿಯಲ್ಲಿ, ವಿಕ್ದಟರ್‍ ಹ್ಯೂಗೋ ಅವರ ರಮ್ಯವಾದದ ಕವಿತೆಗಳನ್ನು ಮೊಗೆಮೊಗೆದು ಕುಡಿಯುತ್ತಿದ್ದ ಫ್ರೆಂಚ್ ಜನತೆಗೆ ಒಗರಿನ ವೈನ್ ರುಚಿಯ ನವ್ಯ ಕಾವ್ಯ ಉಣಬಡಿಸಿದ್ದು ಮತ್ತು ಅದುವರೆಗೂ ಇದ್ದ ಕಾವ್ಯದ ವ್ಯಾಪ್ತಿಗಳನ್ನು ಮೀರಿ ಖಾಸಗಿತನಗಳನ್ನು ಎದೆಯ ಒಲವುಗಳನ್ನು ಪಾರದರ್ಶಕವಾಇ ತೆರೆದಿಟ್ಟ ಅಪ್ರತಿಮ ಪ್ರೇಮ ಕವಿ ಬೋದಿಲೇರ್. ಈತ ಬದುಕಿದ್ದು ಕಾವ್ಯದಲ್ಲೇ. ಅವನ ಕಾವ್ಯ ಮತ್ತು ಕಲೆ ರೂಪುಗೊಂಡಿದ್ದುಬದುಕಿನ ಹತಾಶೆ, ನೋವು, ಖಿನ್ನತೆ ಇತ್ಯಾದಿಗಳಲ್ಲಿ. ಆತನ ಕಾವ್ಯಗಳನ್ನು ಸಂಪಾದಿಸಿದ ಲೇಖಕರು ಹೇಳಿದ್ದಾರೆ.

About the Author

ರಾಜೇಂದ್ರ ಪ್ರಸಾದ್
(19 March 1987)

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ,  ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...

READ MORE

Related Books