ವಿಮುಕ್ತೆಯ ಹಾದಿ

Author : ಎನ್. ಗಾಯತ್ರಿ (ಬೆಂಗಳೂರು)

Pages 162

₹ 50.00




Year of Publication: 1998
Published by: ಜಾಗೃತಿ ಮಹಿಳಾ ಪ್ರಕಾಶನ
Address: 713, ವಿಜಯಾ ಮ್ಯಾನ್‌ಶನ್ ಆರ್. ಪಿ. ಸಿ. ಲೇಔಟ್ ಬೆಂಗಳೂರು - 560 040

Synopsys

‘ವಿಮುಕ್ತೆಯ ಹಾದಿ’  ಲೇಖಕಿ ದಿ. ಎಚ್. ವಿ. ಸಾವಿತ್ರಮ್ಮನವರ ಬದುಕು - ಬರಹಗಳನ್ನು ಕುರಿತ ಲೇಖನಗಳ ಸಂಗ್ರಹ. ಡಾ ಬಿ. ಎನ್. ಸುಮಿತ್ರಾಬಾಯಿ ಮತ್ತು ಲೇಖಕಿ ಎನ್. ಗಾಯತ್ರಿಯವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಎಚ್. ವಿ. ಸಾವಿತ್ರಮ್ಮ ನಮ್ಮ ಒಬ್ಬ ಅಪರೂಪದ ಲೇಖಕಿ. ತಮ್ಮ ಸುತ್ತ ರಾಮಭಜನೆಗಳು ನಡೆಯುತ್ತಿರುವಾಗ ಅವರು “ಸೀತೆ-ರಾಮ-ರಾವಣ', 'ವಿಮುಕ್ತಿ'ಯಂಥ ರಾಮಾಯಣವನ್ನು ಬರೆದರು. ಅವರ ಸಮಕಾಲೀನರು ಮಹಿಳೆಯರನ್ನು ಅಟ್ಟಿಸಿಕೊಂಡು ಬಂದು ವಿವಾಹದೊಳಕ್ಕೆ ದೂಕುತ್ತಿದ್ದ ಕಾಲದಲ್ಲಿ ಪ್ರತೀಕ್ಷೆಯಂಥ ಕಾದಂಬರಿ ಬರೆದು ವಿವಾಹದ ಚೌಕಟ್ಟಿನ ಹಂಗೇ ಇಲ್ಲದೆ ತಾಯ್ತನವನ್ನು ಪಡೆದು ಅಳುಕಿಲ್ಲದೆ ತನ್ನ ದಾರಿಯನ್ನು ರೂಪಿಸಿಕೊಂಡ ನಾಯಕಿಯನ್ನು ಕೊಟ್ಟರು.

ಮಹಿಳೆಯು ಮಧ್ಯ ವಯಸ್ಸೆಂದರೆ ವಾನಪ್ರಸ್ತಕ್ಕೆ, ಪ್ಯಾಕ್ ಮಾಡಿಕೊಳ್ಳುವ ದಿನಗಳು ಎಂದು ಭಾವಿಸುತ್ತಿದ್ದಾಗ ಅವಳೊಳಗೆ ಜೀವಂತವಾಗಿದ್ದ ಯೌವನವನ್ನು ಕಾಣಿಸಿದರು. ಅವರ ಸಮಕಾಲೀನ ಲೇಖಕರು ಧಾರಾವಾಹಿಗಳಿಗಾಗಿ ಬರೆಯುತ್ತಾ ತಮ್ಮ ಕೃತಿಗಳು ಚಲನಚಿತ್ರಗಳಾಗುವ ದಾರಿಗಳನ್ನು ಎದುರುನೋಡುತ್ತಿದ್ದ ಕಾಲದಲ್ಲಿ ಕನ್ನಡ, ಇಂಗ್ಲಿಷ್ ಮಾರ್ಗಕೃತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾ ತಮ್ಮ ಬರಹದ ಮಾರ್ಗಕ್ಕೆ ಅಂಟಿಕೊಂಡರು. ಸದ್ದಿಲ್ಲದೆ-ಸದ್ದಿಲ್ಲದ ವಿಶ್ವದ ಎಷ್ಟೋ ಮಹತ್ವದ ಧ್ವನಿಪೂರ್ಣ ಸಂಗತಿಗಳಂತೆ- ತಾವು ಮಥಿಸಿದ ಬದುಕಿನ ಸಾರವನ್ನು ಮುಕ್ತವಾಗಿ, ಗಂಭೀರವಾಗಿ, ಜೀವಂತವಾಗಿ ತಮ್ಮ ವಿಶಿಷ್ಟ, ಸಹಜ, ಸುಭಗ ರೀತಿಯಲ್ಲಿ ಕನ್ನಡಕ್ಕೆ ಕೊಟ್ಟರು. ಅವರ ಬದುಕು-ಬರಹಗಳನ್ನು ಕುರಿತ ಹಲವು ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ.

About the Author

ಎನ್. ಗಾಯತ್ರಿ (ಬೆಂಗಳೂರು)
(17 January 1957)

ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...

READ MORE

Related Books