ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ

Author : ಗಂಗಾಧರ ರೆಡ್ಡಿ ಎನ್

Pages 272




Published by: ನಿರುಕ್ತ ಪಬ್ಲಿಕೇಶನ್ಸ್‌
Address: ಮಲ್ಲತಹಳ್ಳಿ, ಬೆಂಗಳೂರು-560001
Phone: 08073067542

Synopsys

ಲೇಖಕರಾದ ಗಂಗಾಧರ ರೆಡ್ಡಿ ಎನ್. ಮತ್ತು ಡಾ. ಲೋಕೇಶ ಎಂ.ಯು. ಅವರ ಕೃತಿ ʻವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯʼ. ಈ ಪುಸ್ತಕದ ಮೂಲ ಆಶಯ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾದ್ಯಮ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆಯನ್ನು ಅರ್ಥ ಮಾಡಿಸುವುದಾಗಿದೆ. ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಬರಹಗಾರ ಗಂಗಾಧರ ರೆಡ್ಡಿ ಎನ್. ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾನಿರತರಾದ ಡಾ. ಲೋಕೇಶ ಎಂ.ಯು. ರವರ ಸಹಯೋಗದಲ್ಲಿ ರಚಿಸಿದ ಚೊಚ್ಚಲ ಪುಸ್ತಕವೇ ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ.

About the Author

ಗಂಗಾಧರ ರೆಡ್ಡಿ ಎನ್

ಗಂಗಾಧರ ರೆಡ್ಡಿ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರು. ತಾಯಿ ಲಕ್ಷ್ಮಮ್ಮ ತಂದೆ ನಾರಾಯಣಸ್ವಾಮಿ. ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಎಂ.ಫಿಲ್ ಪದವಿಗಳನ್ನು ಗಳಿಸಿದ ನಂತರ ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಕರ್ನಾಟಕದ ಹಲವು ಸಂಸ್ಥೆ ಮತ್ತು ಜಾಲ (ನೆಟ್‍ವರ್ಕ್) ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಜೊತೆಗೆ ಉಸಿರಿಗಾಗಿ ಹಸಿರು’ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಪರಿಸರ ಸಂರಕ್ಷಣೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಂಘಟನೆ ಜನ್ಮತಳೆದ ಮೊದಲ ವರ್ಷದಲ್ಲೇ ಯೂಥ್ ಫಾರ್ ಸೇವಾ ಸಂಸ್ಥೆ ನೀಡುವ ‘ಯುವಚೇತನ – ಅತ್ಯುತ್ತಮ ...

READ MORE

Related Books